ಹಳ್ಳಕ್ಕೆ ನೀರು ಬಿಡುತ್ತಿದ್ದರಿಂದ ಪ್ರವಾಹದ ಭೀತಿ ಉಂಟಾಗಿದೆ. ‘ಹಳ್ಳದ ದಂಡೆಯ ಮೇಲೆ ಬರುವ ಮಾರಲದಿನ್ನಿ, ಉಸ್ಕಿಹಾಳ, ಬೆಲ್ಲದಮರಡಿ, ದಿನ್ನಿಭಾವಿ, ಮಸ್ಕಿ, ಹುಲ್ಲೂರು, ಉದ್ಬಾಳ, ಬಳಗಾನೂರು ಮುಂತಾದ ಗ್ರಾಮಗಳ ಸಾರ್ವಜನಿಕರು, ರೈತರು ಹಳ್ಳಕ್ಕೆ ಇಳಿಯಬಾರದು’ ಎಂದು ಮಸ್ಕಿ ಜಲಾಶಯ ಯೋಜನೆಯ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದಾವುದ್ ಸಾಬ್ ತಿಳಿಸಿದ್ದಾರೆ.