ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ‘ಎರಡು ದಿನಗಳವರೆಗೆ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹಾಸ್ಯಾಸ್ಪದ ಸಂಗತಿ. ದುಡ್ಡು ಹೇಗೆ ಖರ್ಚು ಮಾಡಬೇಕೆನ್ನುವ ಕಾರ್ಯಕ್ರಮಗಳು ಮಾತ್ರ ಇವರಿಗೆ ಕಾಣುತ್ತವೆ. ಜನರ ಕಷ್ಟಗಳನ್ನು ನಿವಾರಣೆ ಮಾಡಿ, ಅವರನ್ನು ಸುಖದಿಂದ ಇರಿಸಬೇಕೆನ್ನುವ ಚಿಂತನೆ ಮಾಡುತ್ತಿಲ್ಲ. ಬೆಳ್ಳಿ, ಬಂಗಾರ ಉಡುಗೊರೆ ನೀಡಲು ಕೋಟ್ಯಂತರ ರೂಪಾಯಿ ಖರ್ಚು ಮಾಡುವುದು ಸರಿಯಲ್ಲ. ಇವರಿಗೆ ಬುದ್ಧಿ ಹೇಳುವವರು ಯಾರೂ ಇಲ್ಲದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.