ಜನತಾ ಕಾಲೊನಿ ಸಮೀಪದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಬೇಕು. ಅಪೂರ್ಣವಾದ ಕಾಂಕ್ರೀಟ್ ರಸ್ತೆಯನ್ನು ಶೀಘ್ರ ಪೂರ್ಣಗೊಳಿಸಬೇಕು. ಚರಂಡಿ ಸ್ವಚ್ಛ
ಗೊಳಿಸುವುದು, ಸೊಳ್ಳಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡುವುದು, ಪಶು ವೈದ್ಯರ ನೇಮಕ ಮತ್ತು ಸಂತೆ ಮಾರುಕಟ್ಟೆಗೆ ಕಾಂಪೌಂಡ್ ನಿರ್ಮಾಣ ಮತ್ತು ಪ್ರಮುಖ ರಸ್ತೆಗಳ ಬದಿಯಲ್ಲಿ ಬೆಳೆದ ಮುಳ್ಳುಗಿಡಗಳ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು ಎಂದು ಗ್ರಾಮದ ಚೆನ್ನಬಸವ, ಮಾರೆಪ್ಪ ನಾಯಕ, ಗುರಪ್ಪ ಸಾಹುಕಾರ ಮತ್ತು ಮುರಳಿ ಆಗ್ರಹಿಸಿದ್ದಾರೆ.