ಈ ಪಟ್ಟಿಯನ್ನು ಬೆಳೆಸಬಹುದು. ಅವರು ಹುಟ್ಟಿನಿಂದ ಬ್ರಾಹ್ಮಣರಾಗಿದ್ದರೂ ಅದನ್ನು ಮೀರಿ ಬೆಳೆದವರು; ಭಾರತವನ್ನು, ಕರ್ನಾಟಕವನ್ನು, ಕನ್ನಡ ಭಾಷೆಯನ್ನು ಬೆಳೆಸಿದವರು. ಹೀಗಿರುವಾಗ ಒಂದು ಜಾತಿ ಅಥವಾ ವರ್ಗವನ್ನೇ ಅವಹೇಳನ ಮಾಡಿರುವುದು ಚಂಪಾ ಅವರಿಗೆ ತಕ್ಕುದಲ್ಲ. ಅವರು ಖಂಡಿಸುವುದಿದ್ದರೆ ವ್ಯಕ್ತಿಗಳನ್ನು, ಅವರ ದೌರ್ಬಲ್ಯ–ಅಕೃತ್ಯಗಳನ್ನು ನೇರವಾಗಿ ಬಯಲು ಮಾಡಲಿ. ಸದ್ಗುಣ, ಅಕೃತ್ಯ, ದಾಷ್ಟ್ಯ ಇವು ಯಾವುದೇ ವರ್ಗಕ್ಕೆ ಸೀಮಿತವಲ್ಲ ಎಂಬುದನ್ನು ಚಂಪಾ ಅವರಿಗೆ ತಿಳಿಸಿದರೂ ಪ್ರಯೋಜನವಿಲ್ಲ. ಕೆಟ್ಟ ಮನಸ್ಸಿನ ಕೆಟ್ಟ ಮಾತು, ವ್ಯಂಗ್ಯ ಅವರ ಸ್ವಭಾವದ ಭಾಗವೇ ಆಗಿದೆ ಎಂಬುದನ್ನು ಹಲವರು ಬಲ್ಲರು.