ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್‌ನಿಂದ ಬಾಲಕಿಗೆ ಗುದ್ದಿ ತಲೆಮರೆಸಿಕೊಂಡಿದ್ದವ ಸೆರೆ

Last Updated 20 ಅಕ್ಟೋಬರ್ 2017, 20:07 IST
ಅಕ್ಷರ ಗಾತ್ರ

ಬೆಂಗಳೂರು: ಮಾರನಾಯಕನಹಳ್ಳಿ ಕಾಲೊನಿಯಲ್ಲಿ ಬೈಕ್ ಡಿಕ್ಕಿಯಾಗಿ ಬಾಲಕಿ ಸಹನಾ(7) ಮೃತಪಟ್ಟ ಪ್ರಕರಣ ಸಂಬಂಧ ಸವಾರ ರಾಜು (18) ಅಲಿಯಾಸ್ ಬಂಗಾರಿಯನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.

ಬಾಲಕಿ ಪೋಷಕರು ಶುಕ್ರವಾರ ಠಾಣೆಗೆ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಮಾರನಾಯಕನಹಳ್ಳಿಯ ಅತ್ತೆ ಮನೆಯಲ್ಲಿ ಅಡಗಿದ್ದ ಆತನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದರು. ರಾಜು ವಾಹನ ಚಾಲನಾ ಪರವಾನಗಿ ಹೊಂದಿಲ್ಲ. ತಂದೆಗೆ ಮಾಹಿತಿ ನೀಡದೆಯೇ ಬೈಕ್ ಓಡಿಸಿಕೊಂಡು ಬಂದಿದ್ದ. ಆಗ ಅಪ‍ಘಾತ ಸಂಭವಿಸಿದೆ. ಆರೋಪಿಯ ತಂದೆಯ ಹೆಸರಿನಲ್ಲಿ ಬೈಕ್  ನೋಂದಣಿಯಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದೇವೆ ಎಂದರು.

ಕಾಲೊನಿಯ ನಿವಾಸಿ ವೆಂಕಟೇಶ್ ಎಂಬುವರ ಮಗಳಾದ ಸಹನಾ ಗುರುವಾರ ಸಂಜೆ ಮನೆ ಮುಂದೆ ನಿಂತು ಪಟಾಕಿ ಸಿಡಿಸುವುದನ್ನು ನೋಡು
ತ್ತಿದ್ದಳು. ಈ ವೇಳೆ ಅಡ್ಡಾದಿಡ್ಡಿ ಬೈಕ್ ಓಡಿಸಿಕೊಂಡು ಬಂದ ರಾಜು ಆಕೆಗೆ ಗುದ್ದಿ ಪರಾರಿಯಾಗಿದ್ದ. ಚಿಕಿತ್ಸೆಗೆ ಸ್ಪಂದಿಸದೆ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT