‘ವಾರಬಂದಿ ನಿಯಮ ಜಾರಿಯಿಂದ ಭತ್ತ ಬೆಳೆಗೆ ತೊಂದರೆಯಾಗುತ್ತದೆ ಎಂದು ರಾಜಕೀಯ ಮುಖಂಡರು ಧರಣಿ, ಹೋರಾಟವನ್ನು ಹಮ್ಮಿಕೊಂಡು ಭತ್ತ ಬೆಳೆಗಾರರ ಹಿತ ರಕ್ಷಣೆಗೆ ಮುಂದಾಗಿದ್ದರು. ಆದರೆ, ಹೆಚ್ಚು ಮಳೆ ಹಾಗೂ ನೀರಿನ ಬೇಡಿಕೆ ತಗ್ಗಿದ್ದರಿಂದ ವಾರಬಂದಿ ಸಮಸ್ಯೆ ತಾತ್ಕಾಲಿಕವಾಗಿ ಕರಗಿದೆ’ ಎನ್ನುತ್ತಾರೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಭೂಮಿ ಹೋರಾಟ ಸಮಿತಿ ಸಂಚಾಲಕ ಅಶೋಕ ಮಲ್ಲಾಬಾದಿ.