ದಾವಣಗೆರೆ: ಕಾರಾಗೃಹಗಳ ಡಿಜಿಪಿಯಾಗಿದ್ದ ಎಚ್.ಎನ್.ಸತ್ಯನಾರಾಯಣರಾವ್ ಲಂಚ ಪಡೆದ ಆರೋಪ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ವಿನಯ್ಕುಮಾರ್ ನೇತೃತ್ವದ ಸಮಿತಿ ವರದಿ ಸಲ್ಲಿಸಿದರೆ ಸರ್ಕಾರ ಅಂಗೀಕರಿಸಬೇಕು ಎಂದು ಡಿಐಜಿ ಡಿ.ರೂಪಾ ಅಭಿಪ್ರಾಯಪಟ್ಟರು.
ಮಹಿಳಾ ಸಾಹಿತ್ಯ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ‘ವರದಿ ಸಲ್ಲಿಕೆಯಾಗಿದೆಯಾ ಎಂಬ ಮಾಹಿತಿ ಇಲ್ಲ. ಆದರೆ, ವರದಿ ಒಪ್ಪಿ ಕ್ರಮ ತೆಗೆದುಕೊಂಡರೆ ರಾಜ್ಯದ ಕಾರಾಗೃಹಗಳು ಸುಧಾರಣೆಯಾಗಲಿವೆ ಎಂದು ಹೇಳಿದರು.