ಎಚ್.ಎಂ.ಟಿ. ಕೆಂಪೇಗೌಡ ಸಮಿತಿಯ ಅಧ್ಯಕ್ಷ ಆರ್.ಅಶ್ವಥ್, ‘1973ರಲ್ಲಿ ಸಮಿತಿ ಆರಂಭಿಸಲಾಗಿತ್ತು. 1991ರಲ್ಲಿ ಕಲ್ಯಾಣ ಮಂಟಪ ನಿರ್ಮಿಸಿದ್ದು, ಇದಕ್ಕಾಗಿ ಸಮಿತಿಯ ಸದಸ್ಯರು ಒಂದು ತಿಂಗಳ ಸಂಬಳ ನೀಡಿದ್ದರು. ಇತ್ತೀಚಿನ ದಿನಗಳಲ್ಲಿ ಈ ಮಂಟಪಕ್ಕೆ ಬೇಡಿಕೆ ಕಡಿಮೆ ಆಗಿತ್ತು. ಕಟ್ಟಡ ಖಾಲಿ ಇರುವುದಕ್ಕಿಂತ ಜನರ ಉಪಯೋಗಕ್ಕೆ ಸಿಗಲಿ ಎಂಬ ಉದ್ದೇಶದಿಂದ ಮಠಕ್ಕೆ ದಾನ ಮಾಡಿದ್ದೇವೆ’ ಎಂದರು.