ಕಲಬುರ್ಗಿ: ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮತ್ತು ರೈತರ ಬ್ಯಾಂಕ್ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ನವೆಂಬರ್ 1ರಿಂದ 5ರ ವರೆಗೆ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮೌಲ್ಲಾ ಮುಲ್ಲಾ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು. ರೈತರು ಕೃಷಿ ಚಟುವಟಿಕೆಗೆ ಹಾಕುವ ಬಂಡವಾಳಕ್ಕೆ ಶೇ 50ರಷ್ಟು ಲಾಭಾಂಶ ಬರುವ ಹಾಗೆ ಬೆಲೆ ನಿಗದಿ ಪಡಿಸಬೇಕು. 60 ವರ್ಷ ಆಗಿರುವ ರೈತರಿಗೆ ಕನಿಷ್ಠ ₹5 ಸಾವಿರ ಮಾಸಾಶನ ನಿಗದಿ ಮಾಡಬೇಕು. ರೈತರ ಬ್ಯಾಂಕ್ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ನವೆಂಬರ್ 1ರಿಂದ 5ರ ವರೆಗೆ ನಡೆಯುವ ಧರಣಿಯಲ್ಲಿ ಕಲಬುರ್ಗಿಯಿಂದ 60 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಂಘಟನೆ ಜಿಲ್ಲಾ ಘಟಕದ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಸಾಜಿದ್ ಅಹಮ್ಮದ್, ಶರಣಬಸಪ್ಪ ಗಣಜಲಖೇಡ, ಪದ್ಮಾಕರ
ಜಾನಿಬ ಇದ್ದರು.