ಈ ಹಿನ್ನೆಲೆಯಲ್ಲಿ ರೈತರು ಮೆಕ್ಕೆಜೋಳ, ಜೋಳ, ಸೂರ್ಯಕಾಂತಿ, ಸಜ್ಜೆ, ಹತ್ತಿ ಬೆಳೆ ಬಿತ್ತನೆ ಮಾಡಿಕೊಂಡಿದ್ದರು. ಕೆಲ ಮೇಲ್ಭಾಗದ ರೈತರು ಸೆಪ್ಟೆಂಬರ್ ತಿಂಗಳ ಪೂರ್ತಿ ಭತ್ತ ನಾಟಿ ಮಾಡಿದ್ದಾರೆ. ಆದರೆ ಸದ್ಯ ಚಳಿಗಾಲ ಆರಂಭಗೊಂಡಿದ್ದು, ಭತ್ತ ವಡೆ ಬಿಡುವ ಸಮಯದಲ್ಲಿ ಚಳಿ ಉಂಟಾದರೆ ಕಾಳು ಆಗುವುದಿಲ್ಲ ಎಂದು ವಿವರಿಸಿದ್ದಾರೆ.