ಕರ್ನಾಟಕದ ಹೆಮ್ಮೆ ಎನಿಸಿರುವ ವಿಧಾನಸೌಧದ ವಜ್ರಮಹೋತ್ಸವವನ್ನು ಆಚರಿಸಿರುವುದು ಸಂತಸದ ವಿಷಯ. ಆದರೆ ಸರ್ಕಾರ, ವಿಧಾನಸೌಧ ನಿರ್ಮಾತೃ, ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಸಮಾಧಿಗೆ ಒಂದು ಹೂವಿನ ಹಾರವನ್ನೂ ಹಾಕದೆ ಅಮಾನವೀಯವಾಗಿ ವರ್ತಿಸಿದೆ.
ಕೆಂಗಲ್ ಹನುಮಂತಯ್ಯನವರು ವಿಧಾನಸೌಧವನ್ನು ಕಟ್ಟಿಸಿ ಇತಿಹಾಸ ನಿರ್ಮಿಸಿದರು. ಅವರ ನೆನಪಿಗಾಗಿ ರಾಜ್ಯದಲ್ಲಿ ಉಳಿದಿರುವುದು ಒಂದು ಸಮಾಧಿ ಮಾತ್ರ. ಅದೂ ಈಗ ದೂಳು, ಕಸ-ಕಡ್ಡಿಗಳಿಂದ ಕೂಡಿ ದುಃಸ್ಥಿತಿಗೆ ಬಂದಿದೆ. ವಜ್ರಮಹೋತ್ಸವದ ಸಂದರ್ಭದಲ್ಲಾದರೂ ಅವರ ಸಮಾಧಿಗೊಂದು ಹೂಗುಚ್ಛವನ್ನಿಟ್ಟು ಸರ್ಕಾರ ಅವರನ್ನು ಗೌರವಿಸಬೇಕಾಗಿತ್ತು.