ಶಿಶುಗಳ ಸಾವಿನ ಬಗ್ಗೆ ಸ್ಪಷ್ಟನೆ ನೀಡಿದ ಆರೋಗ್ಯಾಧಿಕಾರಿ ಡಾ.ಜಯಂತಿ ರವಿ, 'ಆಸ್ಪತ್ರೆಯಲ್ಲಿ ನಡೆದ ಶಿಶುಗಳ ಸಾವಿನ ಬಗ್ಗೆ ವಿಚಾರಿಸುತ್ತಿದ್ದೇನೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಶಿಶುಗಳುನ್ನು ಬೇರೆ ಆಸ್ಪತ್ರೆಗೆ ಕಳುಹಿಸಿದ ನಂತರ ಮೃತಪಟ್ಟಿವೆ. ಕೆಲವು ಶಿಶುಗಳು ರಕ್ತ ಹೆಪ್ಪುಗಟ್ಟುವಿಕೆ, ರಕ್ತ ವಿಷವಾಗುವಿಕೆಯಿಂದ ಪ್ರಾಣಕಳೆದುಕೊಂಡಿವೆ. ಇದು ಬಹುದೊಡ್ಡ ಅನಾಹುತ. ಇದರ ಬಗ್ಗೆ ವರದಿ ಸಂಗ್ರಹಿಸುತ್ತೇನೆ' ಎಂದಿದ್ದಾರೆ.