ಭಾಲ್ಕಿ: ತಾಲ್ಲೂಕಿನ ಉಚ್ಚಾ ಗ್ರಾಮದ ರೈತ ವಿದ್ಯಾಸಾಗರ ಬಾಬುರಾವ ಅವರ ಹೊಲದಲ್ಲಿ ಬೆಳೆದ ಕಬ್ಬು ಶನಿವಾರ ಬೆಂಕಿಗೆ ಆಹುತಿಯಾಗಿದೆ. ಹೊಲದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿ ಕಡಿದು ಬಿದ್ದು ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಬ್ಬು ಸಂಪೂರ್ಣ ಸುಟ್ಟು ಹೋಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರುವ ವೇಳೆಗಾಗಲೇ ಬಹುತೇಕ ಬಹುತೇಕ ಕಬ್ಬು ಸುಟ್ಟು ಭಸ್ಮವಾಗಿದೆ.
ರೈತ ವಿದ್ಯಾಸಾಗರ ಬಾಬುರಾವ ಅವರ ಜಮೀನು ಮೂಲಕ ಬ್ಯಾಲಹಳ್ಳಿ ಡಬ್ಲ್ಯು, ವರವಟ್ಟಿ ಗ್ರಾಮದ ಹೊಲಗಳಿಗೆ ಸಂಪರ್ಕ ಕಲ್ಪಿಸುವ ಎಸ್.ಟಿ ಲೈನ್ ಹಾದು ಹೋಗಿದೆ. ತುಂಬಾ ಹಳೆಯದಾಗಿದ್ದ ತಂತಿಗಳು ಬಹು ದಿನಗಳಿಂದ ಸಡಿಲಗೊಂಡಿವೆ. ನಷ್ಟ ಪರಿಹಾರಕ್ಕೆ ಸರ್ಕಾರ ಸಹಾಯ ಮಾಡಬೇಕು ಎಂದು ರೈತ ವಿದ್ಯಾಸಾಗರ ಆಗ್ರಹಿಸಿದ್ದಾರೆ.