‘ಅಂಬಾರಿ’ ಸಿನಿಮಾವು ನಟ ಯೋಗೇಶ್ಗೆ ಕನ್ನಡ ಚಿತ್ರರಂಗದಲ್ಲಿ ಹೊಸ ಇಮೇಜ್ ತಂದುಕೊಟ್ಟಿತ್ತು. ಹೀಗಾಗಿ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳಲು ಹೊರಟಿರುವ ಮಂಡ್ಯ ಜಿಲ್ಲೆಯ ಕೀಲಾರ ಗ್ರಾಮದ ವಿಜಿ ಕೀಲಾರ ಪ್ರೀತಿ ಬೆರೆತ ಅಂಬಾರಿ ಏರಲು ಹೊರಟಿದ್ದಾರೆ. ಗಾಂಧಿನಗರದಲ್ಲಿ ಅವಕಾಶಗಳ ಹಿಂದೆ ಬಿದ್ದ ಅವರಿಗೆ ಕಾಡಿದ್ದು, ನಿರಾಸೆ. ಹಾಗಾಗಿ, ನಿರ್ದೇಶನದ ಜೊತೆಗೆ ನಾಯಕ ನಟನಾಗಿಯೂ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ.