<p><strong>ನವದೆಹಲಿ:</strong> ‘ಆಯ್ಕೆ ಸಮಿತಿಯ ಅನುಮತಿ ಕೇಳಿ ಕ್ರಿಕೆಟ್ ಆಡಲು ಅಂಗಣಕ್ಕೆ ಇಳಿದಿರಲಿಲ್ಲ. ಆದ್ದರಿಂದ ನಿವೃತ್ತಿ ಪಡೆಯುವಾಗಲೂ ಅವರ ಅನುಮತಿಗೆ ಕಾಯಲಿಲ್ಲ’ ಎಂದು ವೇಗದ ಬೌಲರ್ ಆಶಿಶ್ ನೆಹ್ರಾ ಹೇಳಿದ್ದಾರೆ.</p>.<p>ಬುಧವಾರ ಇಲ್ಲಿನ ಫಿರೋಜ್ ಕೋಟ್ಲಾ ಅಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ–20 ಪಂದ್ಯದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಅವರು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಅವರ ಟೀಕೆಗೆ ಈ ರೀತಿ ಉತ್ತರಿಸಿದರು.</p>.<p>ನ್ಯೂಜಿಲೆಂಡ್ ವಿರುದ್ಧದ ಟ್ವೆಂಟಿ–20 ಸರಣಿಯ ನಂತರ ನೆಹ್ರಾ ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಎಂದು ಪ್ರಸಾದ್ ಇತ್ತೀಚೆಗೆ ಹೇಳಿದ್ದರು.</p>.<p>‘ನಿವೃತ್ತಿಯ ವಿಷಯವನ್ನು ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ತಿಳಿಸಿದ್ದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು ಯಾಕೆ ಇಷ್ಟು ಆತುರ, ಐಪಿಎಲ್ನಲ್ಲಿ ಆಡಬಹುದು ಅಥವಾ ಕೋಚ್ ಆಗಿ ಕಾರ್ಯನಿರ್ವಹಿಸಬಹುದಲ್ಲವೇ ಎಂದು ಕೇಳಿದರು. ನಾನು ಇದನ್ನು ನಿರಾಕರಿಸಿದೆ’ ಎಂದು ನೆಹ್ರಾ ಹೇಳಿದರು.</p>.<p>‘ವಿದಾಯದ ಪಂದ್ಯಕ್ಕಾಗಿ ನಾನು ಬೇಡಿಕೆ ಇರಿಸಲಿಲ್ಲ. ಆದರೆ ನ್ಯೂಜಿಲೆಂಡ್ ಎದುರಿನ ಪಂದ್ಯ ಆಕಸ್ಮಿಕವಾಗಿ ನನ್ನ ವಿದಾಯ ಪಂದ್ಯ ಆಯಿತು. ಆ ಪಂದ್ಯ ನನ್ನ ತವರು ನೆಲದಲ್ಲೇ ನಡೆದದ್ದು ಕಾಕತಾಳೀಯ’ ಎಂದು ಹೇಳಿದ ಅವರು ‘ತಂಡದ ವ್ಯವಸ್ಥಾಪನ ಮಂಡಳಿಯಲ್ಲಿ ಕೋಚ್ ರವಿಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿ ಇದ್ದಾರೆ. ಅವರೊಂದಿಗೆ ನಾನು ಮಾತನಾಡಿದ್ದೇನೆ. ಆಯ್ಕೆ ಸಮಿತಿ ಜೊತೆ ಮಾತನಾಡುವುದೇನಿದೆ’ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಆಯ್ಕೆ ಸಮಿತಿಯ ಅನುಮತಿ ಕೇಳಿ ಕ್ರಿಕೆಟ್ ಆಡಲು ಅಂಗಣಕ್ಕೆ ಇಳಿದಿರಲಿಲ್ಲ. ಆದ್ದರಿಂದ ನಿವೃತ್ತಿ ಪಡೆಯುವಾಗಲೂ ಅವರ ಅನುಮತಿಗೆ ಕಾಯಲಿಲ್ಲ’ ಎಂದು ವೇಗದ ಬೌಲರ್ ಆಶಿಶ್ ನೆಹ್ರಾ ಹೇಳಿದ್ದಾರೆ.</p>.<p>ಬುಧವಾರ ಇಲ್ಲಿನ ಫಿರೋಜ್ ಕೋಟ್ಲಾ ಅಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ–20 ಪಂದ್ಯದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಅವರು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಅವರ ಟೀಕೆಗೆ ಈ ರೀತಿ ಉತ್ತರಿಸಿದರು.</p>.<p>ನ್ಯೂಜಿಲೆಂಡ್ ವಿರುದ್ಧದ ಟ್ವೆಂಟಿ–20 ಸರಣಿಯ ನಂತರ ನೆಹ್ರಾ ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಎಂದು ಪ್ರಸಾದ್ ಇತ್ತೀಚೆಗೆ ಹೇಳಿದ್ದರು.</p>.<p>‘ನಿವೃತ್ತಿಯ ವಿಷಯವನ್ನು ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ತಿಳಿಸಿದ್ದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು ಯಾಕೆ ಇಷ್ಟು ಆತುರ, ಐಪಿಎಲ್ನಲ್ಲಿ ಆಡಬಹುದು ಅಥವಾ ಕೋಚ್ ಆಗಿ ಕಾರ್ಯನಿರ್ವಹಿಸಬಹುದಲ್ಲವೇ ಎಂದು ಕೇಳಿದರು. ನಾನು ಇದನ್ನು ನಿರಾಕರಿಸಿದೆ’ ಎಂದು ನೆಹ್ರಾ ಹೇಳಿದರು.</p>.<p>‘ವಿದಾಯದ ಪಂದ್ಯಕ್ಕಾಗಿ ನಾನು ಬೇಡಿಕೆ ಇರಿಸಲಿಲ್ಲ. ಆದರೆ ನ್ಯೂಜಿಲೆಂಡ್ ಎದುರಿನ ಪಂದ್ಯ ಆಕಸ್ಮಿಕವಾಗಿ ನನ್ನ ವಿದಾಯ ಪಂದ್ಯ ಆಯಿತು. ಆ ಪಂದ್ಯ ನನ್ನ ತವರು ನೆಲದಲ್ಲೇ ನಡೆದದ್ದು ಕಾಕತಾಳೀಯ’ ಎಂದು ಹೇಳಿದ ಅವರು ‘ತಂಡದ ವ್ಯವಸ್ಥಾಪನ ಮಂಡಳಿಯಲ್ಲಿ ಕೋಚ್ ರವಿಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿ ಇದ್ದಾರೆ. ಅವರೊಂದಿಗೆ ನಾನು ಮಾತನಾಡಿದ್ದೇನೆ. ಆಯ್ಕೆ ಸಮಿತಿ ಜೊತೆ ಮಾತನಾಡುವುದೇನಿದೆ’ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>