ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ‍ಪರೂಪದ ಸಮಾಧಿಗಳು ಪತ್ತೆ

Last Updated 3 ನವೆಂಬರ್ 2017, 8:38 IST
ಅಕ್ಷರ ಗಾತ್ರ

ಮೈಸೂರು: ನಂಜನಗೂಡು ತಾಲ್ಲೂಕಿನ ಬಂಕಳ್ಳಿ ಕಾಲೊನಿಯ ಕೆಂಪಯ್ಯ ಅವರ ಹೊಲದಲ್ಲಿ ದೇಶದಲ್ಲೇ ಅತಿ ಅಪರೂಪ ಎನಿಸಿದ ಸಮಾಧಿಕೋಣೆಗಳು ಪತ್ತೆಯಾಗಿವೆ.
ಈ ರೀತಿಯ ಸಮಾಧಿಗಳು ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ಮಾತ್ರವೇ ಪತ್ತೆಯಾಗಿದ್ದು, ಭಾರತದಲ್ಲಿ ಕೆಲವೇ ಕೆಲವಷ್ಟೇ ಇವೆ ಎಂದು ಕುವೆಂಪುನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ.ರಾಮದಾಸರೆಡ್ಡಿ ತಿಳಿಸಿದ್ದಾರೆ.

ಸಮಾಧಿ ರಚನೆ: ಈ ಸಮಾಧಿಯು 5000 ವರ್ಷಗಳಷ್ಟು ಹಳೆಯದಾಗಿದ್ದು, 89 ಅಡಿ ಸುತ್ತಳತೆ ಹೊಂದಿದೆ. ಇದರ ಮೇಲು ಭಾಗದಲ್ಲಿ 122 ಅಡಿ ಸುತ್ತಳತೆಯ ದೊಡ್ಡ ಬಂಡೆಯಿದೆ. ಇದು 25ರಿಂದ 28 ಟನ್ ತೂಕವಿರಬಹುದೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ 15-30 ಜನರನ್ನು ಒಟ್ಟಿಗೆ ಹಾಕಿ ಸಮಾಧಿ ಮಾಡಲಾಗಿದೆ. ಭಾರತದಲ್ಲಿ ಇಲ್ಲಿಯವರೆಗೂ ದೊರಕಿರುವ ಸಮಾಧಿಗಳಲ್ಲಿ ಇದು ಅಪರೂಪದ್ದು ಎಂದು ಅವರು ಹೇಳಿದ್ದಾರೆ.

ಹೆಡಿಯಾಲ ಅರಣ್ಯ ಉಪವಿಭಾಗ ವ್ಯಾಪ್ತಿಯ ಬೇಲದಕುಪ್ಪೆ ಮಹದೇಶ್ಪರಸ್ವಾಮಿ ದೇವಾಲಯದ ಮುಂಭಾಗದಲ್ಲಿ ನವಶಿಲಾಯುಗ ಸಂಸ್ಕೃತಿಯ ಕುರುಹುಗಳು ಪತ್ತೆಯಾಗಿವೆ. ಕಲ್ಲಿನ ಆಯುಧಗಳು, 3 ಸಾವಿರ ವರ್ಷಗಳಷ್ಟು ಪ್ರಾಚೀನವಾದ ಬೃಹತ್ ಶಿಲಾಯುಗ ಸಂಸ್ಕೃತಿಯ 2 ಶಿಲಾತೊಟ್ಟಿಗಳು, ಒಂದು ಹಾಸು ಬಂಡೆ, ಒಂದು ಕಂಡಿ ಕೋಣೆ ಸಮಾಧಿಗಳು ಸಿಕ್ಕಿವೆ. ಇದೇ ಹೋಬಳಿಯ ಚಿಕ್ಕಬರಗಿ ಗ್ರಾಮದಲ್ಲಿ ಮೂರು ಕಲ್ಲುವೃತ್ತ ಸಮಾಧಿಗಳು ಸಿಕ್ಕಿವೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT