<p><strong>ಮೈಸೂರು:</strong> ನಂಜನಗೂಡು ತಾಲ್ಲೂಕಿನ ಬಂಕಳ್ಳಿ ಕಾಲೊನಿಯ ಕೆಂಪಯ್ಯ ಅವರ ಹೊಲದಲ್ಲಿ ದೇಶದಲ್ಲೇ ಅತಿ ಅಪರೂಪ ಎನಿಸಿದ ಸಮಾಧಿಕೋಣೆಗಳು ಪತ್ತೆಯಾಗಿವೆ.<br /> ಈ ರೀತಿಯ ಸಮಾಧಿಗಳು ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ಮಾತ್ರವೇ ಪತ್ತೆಯಾಗಿದ್ದು, ಭಾರತದಲ್ಲಿ ಕೆಲವೇ ಕೆಲವಷ್ಟೇ ಇವೆ ಎಂದು ಕುವೆಂಪುನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ.ರಾಮದಾಸರೆಡ್ಡಿ ತಿಳಿಸಿದ್ದಾರೆ.</p>.<p><strong>ಸಮಾಧಿ ರಚನೆ:</strong> ಈ ಸಮಾಧಿಯು 5000 ವರ್ಷಗಳಷ್ಟು ಹಳೆಯದಾಗಿದ್ದು, 89 ಅಡಿ ಸುತ್ತಳತೆ ಹೊಂದಿದೆ. ಇದರ ಮೇಲು ಭಾಗದಲ್ಲಿ 122 ಅಡಿ ಸುತ್ತಳತೆಯ ದೊಡ್ಡ ಬಂಡೆಯಿದೆ. ಇದು 25ರಿಂದ 28 ಟನ್ ತೂಕವಿರಬಹುದೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ 15-30 ಜನರನ್ನು ಒಟ್ಟಿಗೆ ಹಾಕಿ ಸಮಾಧಿ ಮಾಡಲಾಗಿದೆ. ಭಾರತದಲ್ಲಿ ಇಲ್ಲಿಯವರೆಗೂ ದೊರಕಿರುವ ಸಮಾಧಿಗಳಲ್ಲಿ ಇದು ಅಪರೂಪದ್ದು ಎಂದು ಅವರು ಹೇಳಿದ್ದಾರೆ.</p>.<p>ಹೆಡಿಯಾಲ ಅರಣ್ಯ ಉಪವಿಭಾಗ ವ್ಯಾಪ್ತಿಯ ಬೇಲದಕುಪ್ಪೆ ಮಹದೇಶ್ಪರಸ್ವಾಮಿ ದೇವಾಲಯದ ಮುಂಭಾಗದಲ್ಲಿ ನವಶಿಲಾಯುಗ ಸಂಸ್ಕೃತಿಯ ಕುರುಹುಗಳು ಪತ್ತೆಯಾಗಿವೆ. ಕಲ್ಲಿನ ಆಯುಧಗಳು, 3 ಸಾವಿರ ವರ್ಷಗಳಷ್ಟು ಪ್ರಾಚೀನವಾದ ಬೃಹತ್ ಶಿಲಾಯುಗ ಸಂಸ್ಕೃತಿಯ 2 ಶಿಲಾತೊಟ್ಟಿಗಳು, ಒಂದು ಹಾಸು ಬಂಡೆ, ಒಂದು ಕಂಡಿ ಕೋಣೆ ಸಮಾಧಿಗಳು ಸಿಕ್ಕಿವೆ. ಇದೇ ಹೋಬಳಿಯ ಚಿಕ್ಕಬರಗಿ ಗ್ರಾಮದಲ್ಲಿ ಮೂರು ಕಲ್ಲುವೃತ್ತ ಸಮಾಧಿಗಳು ಸಿಕ್ಕಿವೆ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ನಂಜನಗೂಡು ತಾಲ್ಲೂಕಿನ ಬಂಕಳ್ಳಿ ಕಾಲೊನಿಯ ಕೆಂಪಯ್ಯ ಅವರ ಹೊಲದಲ್ಲಿ ದೇಶದಲ್ಲೇ ಅತಿ ಅಪರೂಪ ಎನಿಸಿದ ಸಮಾಧಿಕೋಣೆಗಳು ಪತ್ತೆಯಾಗಿವೆ.<br /> ಈ ರೀತಿಯ ಸಮಾಧಿಗಳು ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ಮಾತ್ರವೇ ಪತ್ತೆಯಾಗಿದ್ದು, ಭಾರತದಲ್ಲಿ ಕೆಲವೇ ಕೆಲವಷ್ಟೇ ಇವೆ ಎಂದು ಕುವೆಂಪುನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ.ರಾಮದಾಸರೆಡ್ಡಿ ತಿಳಿಸಿದ್ದಾರೆ.</p>.<p><strong>ಸಮಾಧಿ ರಚನೆ:</strong> ಈ ಸಮಾಧಿಯು 5000 ವರ್ಷಗಳಷ್ಟು ಹಳೆಯದಾಗಿದ್ದು, 89 ಅಡಿ ಸುತ್ತಳತೆ ಹೊಂದಿದೆ. ಇದರ ಮೇಲು ಭಾಗದಲ್ಲಿ 122 ಅಡಿ ಸುತ್ತಳತೆಯ ದೊಡ್ಡ ಬಂಡೆಯಿದೆ. ಇದು 25ರಿಂದ 28 ಟನ್ ತೂಕವಿರಬಹುದೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ 15-30 ಜನರನ್ನು ಒಟ್ಟಿಗೆ ಹಾಕಿ ಸಮಾಧಿ ಮಾಡಲಾಗಿದೆ. ಭಾರತದಲ್ಲಿ ಇಲ್ಲಿಯವರೆಗೂ ದೊರಕಿರುವ ಸಮಾಧಿಗಳಲ್ಲಿ ಇದು ಅಪರೂಪದ್ದು ಎಂದು ಅವರು ಹೇಳಿದ್ದಾರೆ.</p>.<p>ಹೆಡಿಯಾಲ ಅರಣ್ಯ ಉಪವಿಭಾಗ ವ್ಯಾಪ್ತಿಯ ಬೇಲದಕುಪ್ಪೆ ಮಹದೇಶ್ಪರಸ್ವಾಮಿ ದೇವಾಲಯದ ಮುಂಭಾಗದಲ್ಲಿ ನವಶಿಲಾಯುಗ ಸಂಸ್ಕೃತಿಯ ಕುರುಹುಗಳು ಪತ್ತೆಯಾಗಿವೆ. ಕಲ್ಲಿನ ಆಯುಧಗಳು, 3 ಸಾವಿರ ವರ್ಷಗಳಷ್ಟು ಪ್ರಾಚೀನವಾದ ಬೃಹತ್ ಶಿಲಾಯುಗ ಸಂಸ್ಕೃತಿಯ 2 ಶಿಲಾತೊಟ್ಟಿಗಳು, ಒಂದು ಹಾಸು ಬಂಡೆ, ಒಂದು ಕಂಡಿ ಕೋಣೆ ಸಮಾಧಿಗಳು ಸಿಕ್ಕಿವೆ. ಇದೇ ಹೋಬಳಿಯ ಚಿಕ್ಕಬರಗಿ ಗ್ರಾಮದಲ್ಲಿ ಮೂರು ಕಲ್ಲುವೃತ್ತ ಸಮಾಧಿಗಳು ಸಿಕ್ಕಿವೆ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>