ಶಿರ್ವ: ಉದ್ಯಾವರದ ನಿವಾಸಿ, ಬೆಂಗಳೂರಿನ ಭಾರತೀಯ ವಿಜ್ಙಾನ ಸಂಸ್ಥೆಯ (ಐಐಎಸ್ಸಿ) ವಿಜ್ಞಾನಿ ಹರೀಶ್ ಭಟ್ (44) ಮೂಡುಬಿದಿರೆಯಲ್ಲಿ ಶುಕ್ರವಾರ ನಿಧನರಾದರು.
ಮೂಡುಬಿದಿರೆ ಆಳ್ವಾಸ್ ಸಂಸ್ಥೆಯ ವಿಜ್ಞಾನ ಪ್ರದರ್ಶನಕ್ಕೆ ತಯಾರಿ ನಡೆಸಲು ಬಂದಿದ್ದ ವೇಳೆ ಮಿದುಳು ಆಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ಮತ್ತು ಮಗಳು ಇದ್ದಾರೆ.
ಸಸ್ಯ ಸಂಕುಲಗಳ ಸಂಶೋಧನೆಯಲ್ಲಿ ನಿರತರಾಗಿದ್ದ ಅವರು ಆಳ್ವಾಸ್ ಸಂಸ್ಥೆಯೊಂದಿಗೆ ಸಂಶೋಧನೆಗೆ ಒಪ್ಪಂದ ಮಾಡಿಕೊಂಡಿದ್ದರು.
ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯೊಂದಿಗೆ ವಿಜ್ಞಾನ ಮತ್ತು ಪ್ರಕೃತಿ ಸಂಬಂಧಿ ಕೆಲಸಗಳೊಂದಿಗೆ ನಿರತರಾಗಿದ್ದರು. ಕೇಂದ್ರ ಸಚಿವ ಅನಂತಕುಮಾರ್ ಮೃತರ ಅಂತಿಮ ದರ್ಶನ ಪಡೆದರು.