ಬ್ರಹ್ಮಾವರ: ಇಲ್ಲಿನ ಎಸ್.ಎಂ.ಎಸ್ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯಗೊಂಡ ಪದವಿಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದರು. ಬೆಂಗಳೂರು ಉತ್ತರದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ತಮ್ಮದಾ ಗಿಸಿಕೊಂಡರು.
ವೈಯಕ್ತಿಕ ಚಾಂಪಿಯನ್ ಆಗಿ ಬಾಲಕರ ವಿಭಾಗದಲ್ಲಿ ಆಶಿಶ್ ಬಲೋಥಿಯಾ ಮತ್ತು ಶಶಿಧರ್ ಬಿ.ಎಲ್ (ಇಬ್ಬರೂ ದಕ್ಷಿಣ ಕನ್ನಡ), ಬಾಲಕಿಯರ ವಿಭಾಗದಲ್ಲಿ ಉಷಾ ಆರ್ (ಬೆಂಗಳೂರು ಉತ್ತರ) ಹೊರ ಹೊಮ್ಮಿದರು.
ಕೊನೆಯ ದಿನದ ಫಲಿತಾಂಶಗಳು
ಬಾಲಕರ ವಿಭಾಗ:
200 ಮೀ. ಓಟ: ವರುಣ್ ಎಸ್ ಅಡಿಗ (ಉಡುಪಿ)–1, ಅಭಿನ್ ದೇವಾಡಿಗ (ಉಡುಪಿ)–2, ನವನೀತ್ ಎಂ(ದಕ್ಷಿಣ ಕನ್ನಡ)–3;