‘ಈ ರೀತಿ ಪಕ್ಷಾಂತರಗೊಂಡವರ ವರ್ತನೆ, ತಾವು ವಿಧಾನಸಭೆಗೆ ಯಾವ ಪಕ್ಷದ ಟಿಕೆಟ್ ಪಡೆದು ಆರಿಸಿ ಬಂದರೊ ಆ ಪಕ್ಷದ ತತ್ವ, ಕಾರ್ಯಕ್ರಮ ಹಾಗೂ ನೀತಿಗಳಲ್ಲಿ ಅವರಿಗೆ ನಂಬಿಕೆ ಇಲ್ಲವೆಂಬುದಕ್ಕೆ ನಿದರ್ಶನ. ಇಂತಹ ಪ್ರಕರಣಗಳಲ್ಲಿ, ಪಕ್ಷಾಂತರಗೊಂಡವರಿಗೆ, ರಾಷ್ಟ್ರೀಯ ಹಿತಾಸಕ್ತಿ ಹಾಗೂ ರಾಷ್ಟ್ರ ಕಲ್ಯಾಣಕ್ಕೆ ಸಂಬಂಧಿಸಿದ ಯಾವುದೇ ಉನ್ನತ ಹಾಗೂ ಉತ್ತಮ ತತ್ವಾದರ್ಶಗಳ ಸ್ಫೂರ್ತಿಯೂ ಇರುವುದಿಲ್ಲ’ ಎಂದು ಅವರು ಹೇಳಿದರು.