ಮೈಸೂರು: ಟಿಪ್ಪುವನ್ನು ಬೆಂಬಲಿಸಿ ರಾಷ್ಟ್ರಪತಿ ಅವರು ಮಾಡಿದ ಭಾಷಣ ಮಾಡಿದ್ದಕ್ಕೆ ಸಂಸದ ಪ್ರತಾಪಸಿಂಹ ಟ್ವೀಟ್ ಮಾಡಿದ್ದು ತಪ್ಪು ಎಂದು ಅವರಿಗೆ ಹೇಳೋಣ ಎಂದುಕೊಂಡಿದ್ದೆ. ಆದರೆ, ಬಸವನ ಹಿಂದೆ ಬಾಲ ಹಿಡಿದು ಹೋದಂತೆ ಅವರು ಸಚಿವ ಅನಂತಕುಮಾರ್ ಹಿಂದೆ ಹೋದರು ಎಂದು ಸಾಹಿತಿ ಚಂದ್ರಶೇಖರ ಪಾಟೀಲ ವ್ಯಂಗ್ಯವಾಡಿದರು.