ಯಾವುದೇ ಭಯವಿಲ್ಲದೇ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಬಂಧಿಸುವಲ್ಲಿ ಡಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಾಸು, ಚಂದ್ರು, ಪರಮೇಶ್ವರ, ಮಹೇಂದ್ರ, ಲಕ್ಷ್ಮಣ್, ಅಶೋಕ, ರಾಘು, ಅಶೋಕ, ಕನ್ನಪ್ಪ, ಪ್ರವೀಣ, ಪ್ರಶಾಂತ್ ಅವರನ್ನು ಬಂಧಿಸಿ, ಸೊರಬ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.