ಗದಗ: ರೈತರು ಕೃಷಿ ಉತ್ಪನ್ನ ಮಾರುಕಟ್ಟೆಗೆ ತರುವ ಈರುಳ್ಳಿಗೆ ಉತ್ತಮ ದರ ನೀಡುವಂತೆ ಖರೀದಿದಾರರಿಗೆ ಎ.ಪಿ.ಎಂ.ಸಿ ಕಾರ್ಯದರ್ಶಿ ಎಂ. ಮಂಜುನಾಥ್ ಸೂಚಿಸಿದರು. ಈರುಳ್ಳಿ ಕ್ವಿಂಟಲ್ಗೆ ಗರಿಷ್ಠ ₹ 4 ಸಾವಿರ ದರ ಇದ್ದರೂ, ಗುರುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಖರೀದಿದಾರರು ದಿಢೀರನೆ ₹ 1 ಸಾವಿರ ಕಡಿಮೆ ಮಾಡಿ, ಕ್ವಿಂಟಲ್ಗೆ ಕನಿಷ್ಠ ₹ 400ರಿಂದ ₹ 3 ಸಾವಿರ ದರ ನಮೂದಿಸಿದ್ದರು. ಉತ್ತಮ ಬೆಲೆ ನೀಡಲು ಹಿಂದೇಟು ಹಾಕಿದ್ದರು.