ಮಂಡ್ಯ: ಇಲ್ಲಿನ ಅಶೋಕನಗರದಲ್ಲಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಬಳಿ ನೂತನವಾಗಿ ರಮ್ಯಾ ಕ್ಯಾಂಟೀನ್ ಆರಂಭಿಸಲಾಗಿದ್ದು, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಅವರು ಭಾನುವಾರ ಉದ್ಘಾಟಿಸಿದರು.
ಮಾಜಿ ಸಂಸದೆ ರಮ್ಯಾ ಬೆಂಬಲಿಗರಾದ ರಘು ಈ ಕ್ಯಾಂಟೀನ್ ತೆರೆದಿದ್ದಾರೆ. ಯಾವುದೇ ತಿಂಡಿ, ಊಟಕ್ಕೆ ₹ 10 ದರ ನಿಗದಿಪಡಿಸಲಾಗಿದೆ.
ಇತರೆ ಕ್ಯಾಂಟೀನ್ಗಳಿಗಿಂತ ಇದು ಭಿನ್ನವಾಗಿದೆ. ಕುಡಿಯಲು ಬಿಸಿನೀರು ಕೊಡಲಾಗುವುದು. ತಿಂಡಿ ಹಾಗೂ ಊಟದ ಪಾರ್ಸೆಲ್ ತೆಗೆದುಕೊಂಡರೆ ಹೆಚ್ಚುವರಿಯಾಗಿ ಹಣ ತೆಗೆದುಕೊಳ್ಳುವುದಿಲ್ಲ.