‘ದರ್ಭಂಗ ಜಿಲ್ಲೆಯ ಬೇನಿಪುರ ಘಟಕದ 13 ವರ್ಷದ ಬಾಲಕಿ, ಮನೆಯವರು ತನಗೆ ಮದುವೆ ಮಾಡಲು ಹೊರಟಿದ್ದರಿಂದ ತೀವ್ರ ಹತಾಶಳಾಗಿದ್ದಳು. ನವೆಂಬರ್ ಕೊನೆಯ ವಾರ ಆಕೆ ‘ಬಂಧನ್ ತೋಡ್’ ಆ್ಯಪ್ನಲ್ಲಿ ತನ್ನ ನೋವನ್ನು ಹಂಚಿಕೊಂಡಿದ್ದಳು. ನಾಗರಿಕರ ಮೂಲಕ ಈ ದೂರನ್ನು ಪರಿಶೀಲಿಸಿದ ಬಳಿಕ ಕೂಡಲೇ ನಾವು ಪಟ್ನಾದ ಡಿಜಿಪಿಯನ್ನು ಭೇಟಿ ಮಾಡಿದೆವು. ಅವರು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ಅಗತ್ಯ ಕ್ರಮ ಕೈಗೊಂಡರು’ ಎಂದು ಹೆಸರು ಹೇಳಲಿಚ್ಛಿಸದ ‘ಜಂಡರ್ ಅಲಯನ್ಸ್’ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.