ಪ್ರಜಾಪ್ರಭುತ್ವದಲ್ಲಿ ಪಕ್ಷ ಬಿಡುವುದು, ಸೇರ್ಪಡ, ಪಕ್ಷಾಂತರ ಸಾಮಾನ್ಯ. ಒಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದವರು ಪಕ್ಷದ ಸಾಧನೆ ಆಧರಿಸಿ ಚುನಾವಣೆ ಎದುರಿಸಬೇಕು. ವೈಯಕ್ತಿಕ, ಅನ್ಯ ಪಕ್ಷದ ನಡವಳಿಕೆ ಬಗ್ಗೆ ಟೀಕೆ ಮಾಡುವುದು ಸಮಂಜಸವಲ್ಲ ಎಂದು ಟೀಕಿಸಿದರು. ಶಾಸಕ ಜಮೀರ್ ಅಹಮ್ಮದ್, ’ಕುಮಾರಸ್ವಾಮಿ ಅವರು ಮೊದಲು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮುಸ್ಲಿಂ ಅಥವಾ ದಲಿತ
ರನ್ನು ನೇಮಿಸಲಿ. ಬಳಿಕ ಮಾತನಾಡಲಿ’ ಎಂದು ಅವರು ಹೇಳಿದರು.