<p><strong>‘ನಿರಾಯುಧ’ಗೊಳಿಸಿದ ಎಸ್ಸೆನ್</strong></p>.<p><strong>ಬೆಂಗಳೂರು,ಡಿ.4–</strong>‘ಕೆಲವು ಕಾಲ ನಾನು ನಿಮ್ಮ ಮುಖ್ಯಮಂತ್ರಿಯಾಗಿರುತ್ತೇನೆ. ಚುನಾಯಿತನಾಗದಿದ್ದರೆ ಇನ್ನೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿರುತ್ತೇನೆ’ ‘ಬಾಲಬ್ರುಯಿ’ಯಲ್ಲಿ ನಗುತ್ತ ಎದ್ದ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಸೋಮವಾರ ವರದಿಗಾರರನ್ನು ‘ನಿರಾಯುಧ’ಗೊಳಿಸಿದರು.</p>.<p>ಮೂರು ತಿಂಗಳಲ್ಲಿ ಮುಖ್ಯಮಂತ್ರಿ ಪದವಿ ಬಿಡಬೇಕೆಂದು ಗೊತ್ತಾಗಿದೆಯೆಂಬ ಅವಧಿ ಕುರಿತು ಕೇಳಿದಾಗ ಶ್ರೀಯುತರು ನೀಡಿದ ಉತ್ತರವಿದು.</p>.<p>ಮುಖ್ಯಮಂತ್ರಿಗಳು ರಾಜ್ಯದ ಹೊರಗಡೆ ಪ್ರವಾಸ ಮುಗಿಸಿಕೊಂಡು ಹಿಂದುರಿಗಿದಾಗಲೆಲ್ಲ ವರದಿಗಾರರು ಭೇಟಿ ಮಾಡುವುದು ನಡೆದುಬಂದಿರುವ ಸಂಪ್ರದಾಯ. ಬೆಳಿಗ್ಗೆ 9.30ಕ್ಕೆ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಬಂದು ಇಳಿದಾಗ ಅದೇ ವಿನಯ– ವಿಶಾಲ ನಗೆ. ಆದರೆ ಒಂದು ವ್ಯತ್ಯಾಸ– ನಿಜಲಿಂಗಪ್ಪ ಅವರು ಭಾವೀ ಕಾಂಗ್ರೆಸ್ ಅಧ್ಯಕ್ಷರು.</p>.<p><strong>**</strong></p>.<p><strong>ಕೊಟ್ಟ ಹೆಣ್ಣು; ಇತ್ತ ಆಜ್ಞೆ</strong></p>.<p><strong>ನವದೆಹಲಿ, ಡಿ. 4–</strong> ಮಾತು, ಹೆಣ್ಣು ಮತ್ತು ಉಡುಗೊರೆ– ಇವು ಮೂರನ್ನೂ ಹಿಂದಕ್ಕೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ.</p>.<p>‘ನಾರದ ಸ್ಮೃತಿಯಲ್ಲಿನ ಈ ಸೂಕ್ತಿಯನ್ನು ಇಂದು ಲೋಕಸಭೆಯಲ್ಲಿ ಉದ್ಧರಿಸಿದವರು ಆಂಧ್ರದ ನ್ಯಾಯಶಾಸ್ತ್ರವೇತ್ತ ಶ್ರೀ ಟಿ. ವಿಶ್ವನಾಥಂ.</p>.<p>ಇದೇ ರೀತಿ, ರಾಜ್ಯವೊಂದರ ಮಂತ್ರಿ ಮಂಡಲ ವಜಾ ಮಾಡುವುದಕ್ಕೆ ಆ ರಾಜ್ಯದ ರಾಜ್ಯಪಾಲರು ಹೊರಡಿಸಿದ ಆಜ್ಞೆಯನ್ನೂ ಸಹ ಹಿಂದಕ್ಕೆ ತೆಗೆದುಕೊಳ್ಳುವುದು ಅಸಾಧ್ಯ ಎಂದರು. ಪಶ್ಚಿಮ ಬಂಗಾಳದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ರಾಜ್ಯಪಾಲರಿಗೆ ಇರುವ ಅಧಿಕಾರಗಳ ಬಗ್ಗೆ ಅವರು ತಮ್ಮ ಅಭಿಪ್ರಾಯ ಒತ್ತಿ ಹೇಳಿದರು.</p>.<p><strong>**</strong></p>.<p><strong>ಉತ್ತಮ ಸ್ಥಿತಿಯಲ್ಲಿ ‘ಬದಲಿ ಹೃದಯ’</strong></p>.<p><strong>ಕೇಪ್ಟೌನ್, ಡಿ. 4– </strong>ಇಲ್ಲಿನ 56 ವರ್ಷ ವಯಸ್ಸಿನ ವ್ಯಾಪಾರಿ ಲೂಯಿಸ್ ವಾಪ್ಕನ್ಸ್ಕಿ ನಿನ್ನೆ ಐತಿಹಾಸಿಕ ಮಹತ್ವದ ಚಿಕಿತ್ಸೆ ಮಾಡಿಸಿಕೊಂಡು, ಸತ್ತ ಯುವತಿಯ ಹೃದಯವನ್ನು ಅಳವಡಿಸಿಕೊಂಡ 33 ಗಂಟೆಗಳ ನಂತರ ಪ್ರಜ್ಞೆಯಿಂದಿದ್ದ.</p>.<p>ಆದರೆ ಮಾತನಾಡಲು ಅವನಿಗೆ ಸಾಧ್ಯವಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ನಿರಾಯುಧ’ಗೊಳಿಸಿದ ಎಸ್ಸೆನ್</strong></p>.<p><strong>ಬೆಂಗಳೂರು,ಡಿ.4–</strong>‘ಕೆಲವು ಕಾಲ ನಾನು ನಿಮ್ಮ ಮುಖ್ಯಮಂತ್ರಿಯಾಗಿರುತ್ತೇನೆ. ಚುನಾಯಿತನಾಗದಿದ್ದರೆ ಇನ್ನೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿರುತ್ತೇನೆ’ ‘ಬಾಲಬ್ರುಯಿ’ಯಲ್ಲಿ ನಗುತ್ತ ಎದ್ದ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಸೋಮವಾರ ವರದಿಗಾರರನ್ನು ‘ನಿರಾಯುಧ’ಗೊಳಿಸಿದರು.</p>.<p>ಮೂರು ತಿಂಗಳಲ್ಲಿ ಮುಖ್ಯಮಂತ್ರಿ ಪದವಿ ಬಿಡಬೇಕೆಂದು ಗೊತ್ತಾಗಿದೆಯೆಂಬ ಅವಧಿ ಕುರಿತು ಕೇಳಿದಾಗ ಶ್ರೀಯುತರು ನೀಡಿದ ಉತ್ತರವಿದು.</p>.<p>ಮುಖ್ಯಮಂತ್ರಿಗಳು ರಾಜ್ಯದ ಹೊರಗಡೆ ಪ್ರವಾಸ ಮುಗಿಸಿಕೊಂಡು ಹಿಂದುರಿಗಿದಾಗಲೆಲ್ಲ ವರದಿಗಾರರು ಭೇಟಿ ಮಾಡುವುದು ನಡೆದುಬಂದಿರುವ ಸಂಪ್ರದಾಯ. ಬೆಳಿಗ್ಗೆ 9.30ಕ್ಕೆ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಬಂದು ಇಳಿದಾಗ ಅದೇ ವಿನಯ– ವಿಶಾಲ ನಗೆ. ಆದರೆ ಒಂದು ವ್ಯತ್ಯಾಸ– ನಿಜಲಿಂಗಪ್ಪ ಅವರು ಭಾವೀ ಕಾಂಗ್ರೆಸ್ ಅಧ್ಯಕ್ಷರು.</p>.<p><strong>**</strong></p>.<p><strong>ಕೊಟ್ಟ ಹೆಣ್ಣು; ಇತ್ತ ಆಜ್ಞೆ</strong></p>.<p><strong>ನವದೆಹಲಿ, ಡಿ. 4–</strong> ಮಾತು, ಹೆಣ್ಣು ಮತ್ತು ಉಡುಗೊರೆ– ಇವು ಮೂರನ್ನೂ ಹಿಂದಕ್ಕೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ.</p>.<p>‘ನಾರದ ಸ್ಮೃತಿಯಲ್ಲಿನ ಈ ಸೂಕ್ತಿಯನ್ನು ಇಂದು ಲೋಕಸಭೆಯಲ್ಲಿ ಉದ್ಧರಿಸಿದವರು ಆಂಧ್ರದ ನ್ಯಾಯಶಾಸ್ತ್ರವೇತ್ತ ಶ್ರೀ ಟಿ. ವಿಶ್ವನಾಥಂ.</p>.<p>ಇದೇ ರೀತಿ, ರಾಜ್ಯವೊಂದರ ಮಂತ್ರಿ ಮಂಡಲ ವಜಾ ಮಾಡುವುದಕ್ಕೆ ಆ ರಾಜ್ಯದ ರಾಜ್ಯಪಾಲರು ಹೊರಡಿಸಿದ ಆಜ್ಞೆಯನ್ನೂ ಸಹ ಹಿಂದಕ್ಕೆ ತೆಗೆದುಕೊಳ್ಳುವುದು ಅಸಾಧ್ಯ ಎಂದರು. ಪಶ್ಚಿಮ ಬಂಗಾಳದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ರಾಜ್ಯಪಾಲರಿಗೆ ಇರುವ ಅಧಿಕಾರಗಳ ಬಗ್ಗೆ ಅವರು ತಮ್ಮ ಅಭಿಪ್ರಾಯ ಒತ್ತಿ ಹೇಳಿದರು.</p>.<p><strong>**</strong></p>.<p><strong>ಉತ್ತಮ ಸ್ಥಿತಿಯಲ್ಲಿ ‘ಬದಲಿ ಹೃದಯ’</strong></p>.<p><strong>ಕೇಪ್ಟೌನ್, ಡಿ. 4– </strong>ಇಲ್ಲಿನ 56 ವರ್ಷ ವಯಸ್ಸಿನ ವ್ಯಾಪಾರಿ ಲೂಯಿಸ್ ವಾಪ್ಕನ್ಸ್ಕಿ ನಿನ್ನೆ ಐತಿಹಾಸಿಕ ಮಹತ್ವದ ಚಿಕಿತ್ಸೆ ಮಾಡಿಸಿಕೊಂಡು, ಸತ್ತ ಯುವತಿಯ ಹೃದಯವನ್ನು ಅಳವಡಿಸಿಕೊಂಡ 33 ಗಂಟೆಗಳ ನಂತರ ಪ್ರಜ್ಞೆಯಿಂದಿದ್ದ.</p>.<p>ಆದರೆ ಮಾತನಾಡಲು ಅವನಿಗೆ ಸಾಧ್ಯವಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>