ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡಿದರೂ ಸಾಧನೆಯಿಲ್ಲದೆ ಸೊರಗಿ ಹೋಗುವ ಕಾರ್ಯಕ್ರಮ ಗಳಿಗಿಂತ ಅಪಾಯದ ಅಂಚಿನಲ್ಲಿರುವ ಬುಡಕಟ್ಟು ಸಂಸ್ಕೃತಿಗೆ ಮರುಜೀವ ತುಂಬಬಲ್ಲ ಇಂಥ ನುಡಿಸಿರಿಗಳು ಕನ್ನಡದ ತಳಸಂಸ್ಕೃತಿಯನ್ನು ಬದುಕಿಸಬಲ್ಲವು. ಜನಪದೀಯ ಕಾವ್ಯ- ನಾಟಕ- ಕಥೆ- ಕ್ರೀಡೆ- ಕೈಗಾರಿಕೆ- ಬಣ್ಣಗಾರಿಕೆಗಳ ಪುನರ್ನವೀಕರಣದ ಮೂಲಕ ವಿಶ್ವಕ್ಕೆ ಕನ್ನಡದ ಕಾಣಿಕೆ ಕೊಡಬಲ್ಲವು.