<p><strong>ಮುಂಬೈ</strong>: ನಷ್ಟದಲ್ಲಿರುವ ಏರ್ ಇಂಡಿಯಾ ಸಂಸ್ಥೆಯ ದುಡಿಯುವ ಬಂಡವಾಳಕ್ಕಾಗಿ, ಅಲ್ಪಾವಧಿಗೆ ₹ 1,500 ಕೋಟಿ ಸಾಲ ಪಡೆಯಲು ಮುಂದಾಗಿದೆ.</p>.<p>ಉದ್ದೇಶಿತ ಸಾಲ ಪಡೆಯಲು ಸಂಸ್ಥೆಯು ಸರ್ಕಾರದ ಖಾತರಿಗಾಗಿ ಎದುರು ನೋಡುತ್ತಿದೆ ಎಂದು ಬಿಡ್ಗಾಗಿ ಸಲ್ಲಿಸಿರುವ ದಾಖಲೆ ಪತ್ರದಲ್ಲಿ ಹೇಳಲಾಗಿದೆ.</p>.<p>ಸಾಲ ನೀಡಲು ಆಸಕ್ತಿ ಇರುವ ಬ್ಯಾಂಕ್ಗಳು ಡಿಸೆಂಬರ್ 12ರ ಒಳಗಾಗಿ ಬಿಡ್ ಸಲ್ಲಿಸಬೇಕು. ಅದರಲ್ಲಿ ಸಾಲದ ಮೊತ್ತವನ್ನೂ ನಮೂದಿಸಿರಬೇಕು. ಸಾಲ ಮರುಪಾವತಿ ಅವಧಿಯನ್ನು 2018ರ ಜೂನ್ಗೆ ನಿಗದಿ ಮಾಡಲಾಗಿದೆ. ಅವಧಿ ವಿಸ್ತರಣೆ ಮಾಡುವ ಸಾಧ್ಯತೆಯೂ ಇದೆ.</p>.<p>ಏರ್ ಇಂಡಿಯಾ ₹ 52,000 ಕೋಟಿ ಸಾಲ ಬಾಕಿ ಉಳಿಸಿಕೊಂಡಿದೆ. ಹೀಗಾಗಿ 2032ರವರೆಗೆ ಏರ್ಇಂಡಿಯಾಗೆ ₹ 50 ಸಾವಿರ ಕೋಟಿ ಬಂಡವಾಳ ನೆರವು ನೀಡುವುದಾಗಿ ಹಿಂದಿನ ಯುಪಿಎ ಸರ್ಕಾರ ಭರವಸೆ ನೀಡಿತ್ತು. ಇದರಲ್ಲಿ ಸರ್ಕಾರ ಈಗಾಗಲೇ ₹ 24,000 ಕೋಟಿ ನೀಡಿದೆ. ಇನ್ನುಳಿದ ಮೊತ್ತವನ್ನು ಷೇರು ವಿಕ್ರಯದ ಮೂಲಕ ನೀಡಲಿದೆ.</p>.<p>ಏರ್ ಇಂಡಿಯಾ ಮತ್ತು ಅದರ ಐದು ಅಂಗ ಸಂಸ್ಥೆಗಳ ಷೇರು ವಿಕ್ರಯ ಮಾಡಲು ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಸಚಿವರ ತಂಡ ಷೇರು ವಿಕ್ರಯದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ನಷ್ಟದಲ್ಲಿರುವ ಏರ್ ಇಂಡಿಯಾ ಸಂಸ್ಥೆಯ ದುಡಿಯುವ ಬಂಡವಾಳಕ್ಕಾಗಿ, ಅಲ್ಪಾವಧಿಗೆ ₹ 1,500 ಕೋಟಿ ಸಾಲ ಪಡೆಯಲು ಮುಂದಾಗಿದೆ.</p>.<p>ಉದ್ದೇಶಿತ ಸಾಲ ಪಡೆಯಲು ಸಂಸ್ಥೆಯು ಸರ್ಕಾರದ ಖಾತರಿಗಾಗಿ ಎದುರು ನೋಡುತ್ತಿದೆ ಎಂದು ಬಿಡ್ಗಾಗಿ ಸಲ್ಲಿಸಿರುವ ದಾಖಲೆ ಪತ್ರದಲ್ಲಿ ಹೇಳಲಾಗಿದೆ.</p>.<p>ಸಾಲ ನೀಡಲು ಆಸಕ್ತಿ ಇರುವ ಬ್ಯಾಂಕ್ಗಳು ಡಿಸೆಂಬರ್ 12ರ ಒಳಗಾಗಿ ಬಿಡ್ ಸಲ್ಲಿಸಬೇಕು. ಅದರಲ್ಲಿ ಸಾಲದ ಮೊತ್ತವನ್ನೂ ನಮೂದಿಸಿರಬೇಕು. ಸಾಲ ಮರುಪಾವತಿ ಅವಧಿಯನ್ನು 2018ರ ಜೂನ್ಗೆ ನಿಗದಿ ಮಾಡಲಾಗಿದೆ. ಅವಧಿ ವಿಸ್ತರಣೆ ಮಾಡುವ ಸಾಧ್ಯತೆಯೂ ಇದೆ.</p>.<p>ಏರ್ ಇಂಡಿಯಾ ₹ 52,000 ಕೋಟಿ ಸಾಲ ಬಾಕಿ ಉಳಿಸಿಕೊಂಡಿದೆ. ಹೀಗಾಗಿ 2032ರವರೆಗೆ ಏರ್ಇಂಡಿಯಾಗೆ ₹ 50 ಸಾವಿರ ಕೋಟಿ ಬಂಡವಾಳ ನೆರವು ನೀಡುವುದಾಗಿ ಹಿಂದಿನ ಯುಪಿಎ ಸರ್ಕಾರ ಭರವಸೆ ನೀಡಿತ್ತು. ಇದರಲ್ಲಿ ಸರ್ಕಾರ ಈಗಾಗಲೇ ₹ 24,000 ಕೋಟಿ ನೀಡಿದೆ. ಇನ್ನುಳಿದ ಮೊತ್ತವನ್ನು ಷೇರು ವಿಕ್ರಯದ ಮೂಲಕ ನೀಡಲಿದೆ.</p>.<p>ಏರ್ ಇಂಡಿಯಾ ಮತ್ತು ಅದರ ಐದು ಅಂಗ ಸಂಸ್ಥೆಗಳ ಷೇರು ವಿಕ್ರಯ ಮಾಡಲು ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಸಚಿವರ ತಂಡ ಷೇರು ವಿಕ್ರಯದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>