<p><strong>ಬೆಂಗಳೂರು: </strong>ಇಂಡಿಯನ್ ವ್ಹೀಲ್ಚೇರ್ ಟೆನಿಸ್ ಟೂರ್ ಟೆಬೆಬುಯಿಯಾ ಓಪನ್ ಟೆನಿಸ್ ಚಾಂಪಿಯನ್ಷಿಪ್ ಡಿಸೆಂಬರ್ 14ರಿಂದ 17ರವರೆಗೆ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್ಎಲ್ಟಿಎ) ಅಂಗಳದಲ್ಲಿ ನಡೆಯಲಿದೆ.</p>.<p>ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಅಥ್ಲೀಟ್ ರೀತ್ ಅಬ್ರಾಹಂ ಟ್ರೋಫಿ ಅನಾವರಣ ಮಾಡಿದರು.</p>.<p>ಕರ್ನಾಟಕ, ನವದೆಹಲಿ, ಕೋಯಮತ್ತೂರು, ಚೆನ್ನೈ ಮತ್ತು ಮುಂಬೈನ ಒಟ್ಟು 42 ಮಂದಿ ಕ್ರೀಡಾಪಟುಗಳು ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಇದರಲ್ಲಿ ಆರು ಮಂದಿ ಮಹಿಳೆಯರು ಮತ್ತು 36 ಮಂದಿ ಪುರುಷರು ಸೇರಿದ್ದಾರೆ.</p>.<p>ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗಗಳಲ್ಲಿ ಸ್ಪರ್ಧೆಗಳು ಆಯೋಜನೆಯಾಗಿವೆ. ಡಿಸೆಂಬರ್ 13ರ ಬುಧವಾರ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಇದರಲ್ಲಿ ಗೆದ್ದ ಎಂಟು ಮಂದಿ ಮುಖ್ಯ ಸುತ್ತಿಗೆ ಅರ್ಹತೆ ಗಳಿಸಲಿದ್ದಾರೆ. ಪುರುಷರ ವಿಭಾಗದಲ್ಲಿ 24 ಮಂದಿಗೆ ನೇರ ಅರ್ಹತೆ ಸಿಕ್ಕಿದೆ.</p>.<p>ಹೋದ ವರ್ಷ ಶೇಖರ್ ವೀರಸ್ವಾಮಿ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದರು. ಡಬಲ್ಸ್ ವಿಭಾಗದಲ್ಲಿ ಶೇಖರ್ ಮತ್ತು ಗೋಪಿನಾಥ್ ಚಾಂಪಿಯನ್ ಆಗಿದ್ದರು.</p>.<p>ಪ್ರತಿಮಾ ರಾವ್ ಮತ್ತು ಶೇಖರ್ ವೀರಸ್ವಾಮಿ ಅವರು ಈ ಬಾರಿ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್ ವಿಭಾಗಗಳಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಇಂಡಿಯನ್ ವ್ಹೀಲ್ಚೇರ್ ಟೆನಿಸ್ ಟೂರ್ ಟೆಬೆಬುಯಿಯಾ ಓಪನ್ ಟೆನಿಸ್ ಚಾಂಪಿಯನ್ಷಿಪ್ ಡಿಸೆಂಬರ್ 14ರಿಂದ 17ರವರೆಗೆ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್ಎಲ್ಟಿಎ) ಅಂಗಳದಲ್ಲಿ ನಡೆಯಲಿದೆ.</p>.<p>ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಅಥ್ಲೀಟ್ ರೀತ್ ಅಬ್ರಾಹಂ ಟ್ರೋಫಿ ಅನಾವರಣ ಮಾಡಿದರು.</p>.<p>ಕರ್ನಾಟಕ, ನವದೆಹಲಿ, ಕೋಯಮತ್ತೂರು, ಚೆನ್ನೈ ಮತ್ತು ಮುಂಬೈನ ಒಟ್ಟು 42 ಮಂದಿ ಕ್ರೀಡಾಪಟುಗಳು ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಇದರಲ್ಲಿ ಆರು ಮಂದಿ ಮಹಿಳೆಯರು ಮತ್ತು 36 ಮಂದಿ ಪುರುಷರು ಸೇರಿದ್ದಾರೆ.</p>.<p>ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗಗಳಲ್ಲಿ ಸ್ಪರ್ಧೆಗಳು ಆಯೋಜನೆಯಾಗಿವೆ. ಡಿಸೆಂಬರ್ 13ರ ಬುಧವಾರ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಇದರಲ್ಲಿ ಗೆದ್ದ ಎಂಟು ಮಂದಿ ಮುಖ್ಯ ಸುತ್ತಿಗೆ ಅರ್ಹತೆ ಗಳಿಸಲಿದ್ದಾರೆ. ಪುರುಷರ ವಿಭಾಗದಲ್ಲಿ 24 ಮಂದಿಗೆ ನೇರ ಅರ್ಹತೆ ಸಿಕ್ಕಿದೆ.</p>.<p>ಹೋದ ವರ್ಷ ಶೇಖರ್ ವೀರಸ್ವಾಮಿ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದರು. ಡಬಲ್ಸ್ ವಿಭಾಗದಲ್ಲಿ ಶೇಖರ್ ಮತ್ತು ಗೋಪಿನಾಥ್ ಚಾಂಪಿಯನ್ ಆಗಿದ್ದರು.</p>.<p>ಪ್ರತಿಮಾ ರಾವ್ ಮತ್ತು ಶೇಖರ್ ವೀರಸ್ವಾಮಿ ಅವರು ಈ ಬಾರಿ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್ ವಿಭಾಗಗಳಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>