<p><strong>ಬೆಂಗಳೂರು: </strong>ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (ಬಿಐಎಎಲ್) ಒಂದು ತಿಂಗಳ ಅವಧಿಯಲ್ಲಿ ₹ 15 ಕೋಟಿ ಆಸ್ತಿ ತೆರಿಗೆ ಪಾವತಿ<br /> ಸುವಂತೆ ಹೈಕೋರ್ಟ್ ಆದೇಶಿಸಿದೆ. ಈ ಮೊತ್ತವನ್ನು ಸ್ಥಳೀಯ ಪಂಚಾಯಿತಿಗೆ ಒಂದು ತಿಂಗಳಿನಲ್ಲಿ ಠೇವಣಿ ಇರಿಸುವಂತೆ ನಿರ್ದೇಶಿಸಲಾಗಿದೆ.</p>.<p>ದೇವನಹಳ್ಳಿ ತಾಲ್ಲೂಕಿನ ಅಣ್ಣೇಶ್ವರ, ಬೆಟ್ಟಕೋಟೆ, ದೊಡ್ಡಜಾಲ ಮತ್ತು ಬಂಡಿಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿಗಳು ವಿಧಿಸಿರುವ ತೆರಿಗೆ ಪ್ರಶ್ನಿಸಿ ಬಿಐಎಎಲ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.</p>.<p>ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ‘ಬಿಐಎಎಲ್ ತನ್ನ ಸುಪರ್ದಿಯಲ್ಲಿರುವ ಪ್ರದೇಶದಲ್ಲಿ ಗುತ್ತಿಗೆ ಮತ್ತು ಬಾಡಿಗೆ ನೀಡಿರುವ ಕಟ್ಟಡಗಳ ಮೇಲಿನ ವಾರ್ಷಿಕ ಆಸ್ತಿ ತೆರಿಗೆಯಲ್ಲಿ ₹ 80 ಕೋಟಿ ಬಾಕಿ ಉಳಿಸಿಕೊಂಡಿದೆ. ಯಾವ ಕಟ್ಟಡಗಳನ್ನು ಯಾವ ರೀತಿ ವಾಣಿಜ್ಯ ಬಳಕೆಗೆ ನೀಡಿದೆ ಎಂಬ ವಿವರಗಳನ್ನು ಬಿಐಎಎಲ್ ಸರ್ಕಾರಕ್ಕೆ ನೀಡಿಲ್ಲ. ಹೀಗಾಗಿ ಸ್ಥಳೀಯ ಪಂಚಾಯಿತಿಗಳು ಗ್ರಾಮ ಸ್ವರಾಜ್ ಕಾಯ್ದೆ 199ರ ಪ್ರಕಾರ ಈ ತೆರಿಗೆ ವಿಧಿಸಿವೆ. ಇದನ್ನು ಪ್ರಶ್ನಿಸಿರುವ ಕಂಪೆನಿಯ ಕ್ರಮದಲ್ಲಿ ಹುರುಳಿಲ್ಲ’ ಎಂದರು.</p>.<p>‘ವಿಮಾನ ನಿಲ್ದಾಣ ಅಭಿವೃದ್ಧಿಗೊಳ್ಳಲಿ ಎಂದು ಪಂಚಾಯಿತಿಗಳು 2010ರವರೆಗೂ ಬಿಐಎಎಲ್ನಿಂದ ಯಾವುದೇ ತೆರಿಗೆ ಸಂಗ್ರಹ ಮಾಡಿರಲಿಲ್ಲ. ಆದರೆ, 2010–11ರಿಂದ ಈತನಕ ಪಾವತಿ ಮಾಡಬೇಕಿರುವ ಮೊತ್ತದಲ್ಲಿ ಬಿಐಎಎಲ್ ₹ 7.32 ಕೋಟಿ ಪಾವತಿ ಮಾಡಿದೆ’ ಎಂದು ಪೊನ್ನಣ್ಣ ವಿವರಿಸಿದರು.</p>.<p><strong>ಮಾರ್ಗದರ್ಶಿ ಸೂತ್ರ ರೂಪಿಸಿ: </strong>‘ಪಂಚಾಯಿತಿಗಳು ತೆರಿಗೆ ವಿಧಿಸುವ ಕುರಿತಂತೆ ಮುಂದಿನ ಮೂರು ತಿಂಗಳಿನಲ್ಲಿ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರಚಿಸಿ’ ಎಂದು ನ್ಯಾಯಪೀಠವು ಪೊನ್ನಣ್ಣ ಅವರಿಗೆ ನಿರ್ದೇಶಿಸಿತು. ವಿಚಾರಣೆಯನ್ನು 2018ರ ಏಪ್ರಿಲ್ 2ಕ್ಕೆ ಮುಂದೂಡಲಾಗಿದೆ.</p>.<p>ವಿಚಾರಣೆ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾ ದೇವಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (ಬಿಐಎಎಲ್) ಒಂದು ತಿಂಗಳ ಅವಧಿಯಲ್ಲಿ ₹ 15 ಕೋಟಿ ಆಸ್ತಿ ತೆರಿಗೆ ಪಾವತಿ<br /> ಸುವಂತೆ ಹೈಕೋರ್ಟ್ ಆದೇಶಿಸಿದೆ. ಈ ಮೊತ್ತವನ್ನು ಸ್ಥಳೀಯ ಪಂಚಾಯಿತಿಗೆ ಒಂದು ತಿಂಗಳಿನಲ್ಲಿ ಠೇವಣಿ ಇರಿಸುವಂತೆ ನಿರ್ದೇಶಿಸಲಾಗಿದೆ.</p>.<p>ದೇವನಹಳ್ಳಿ ತಾಲ್ಲೂಕಿನ ಅಣ್ಣೇಶ್ವರ, ಬೆಟ್ಟಕೋಟೆ, ದೊಡ್ಡಜಾಲ ಮತ್ತು ಬಂಡಿಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿಗಳು ವಿಧಿಸಿರುವ ತೆರಿಗೆ ಪ್ರಶ್ನಿಸಿ ಬಿಐಎಎಲ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.</p>.<p>ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ‘ಬಿಐಎಎಲ್ ತನ್ನ ಸುಪರ್ದಿಯಲ್ಲಿರುವ ಪ್ರದೇಶದಲ್ಲಿ ಗುತ್ತಿಗೆ ಮತ್ತು ಬಾಡಿಗೆ ನೀಡಿರುವ ಕಟ್ಟಡಗಳ ಮೇಲಿನ ವಾರ್ಷಿಕ ಆಸ್ತಿ ತೆರಿಗೆಯಲ್ಲಿ ₹ 80 ಕೋಟಿ ಬಾಕಿ ಉಳಿಸಿಕೊಂಡಿದೆ. ಯಾವ ಕಟ್ಟಡಗಳನ್ನು ಯಾವ ರೀತಿ ವಾಣಿಜ್ಯ ಬಳಕೆಗೆ ನೀಡಿದೆ ಎಂಬ ವಿವರಗಳನ್ನು ಬಿಐಎಎಲ್ ಸರ್ಕಾರಕ್ಕೆ ನೀಡಿಲ್ಲ. ಹೀಗಾಗಿ ಸ್ಥಳೀಯ ಪಂಚಾಯಿತಿಗಳು ಗ್ರಾಮ ಸ್ವರಾಜ್ ಕಾಯ್ದೆ 199ರ ಪ್ರಕಾರ ಈ ತೆರಿಗೆ ವಿಧಿಸಿವೆ. ಇದನ್ನು ಪ್ರಶ್ನಿಸಿರುವ ಕಂಪೆನಿಯ ಕ್ರಮದಲ್ಲಿ ಹುರುಳಿಲ್ಲ’ ಎಂದರು.</p>.<p>‘ವಿಮಾನ ನಿಲ್ದಾಣ ಅಭಿವೃದ್ಧಿಗೊಳ್ಳಲಿ ಎಂದು ಪಂಚಾಯಿತಿಗಳು 2010ರವರೆಗೂ ಬಿಐಎಎಲ್ನಿಂದ ಯಾವುದೇ ತೆರಿಗೆ ಸಂಗ್ರಹ ಮಾಡಿರಲಿಲ್ಲ. ಆದರೆ, 2010–11ರಿಂದ ಈತನಕ ಪಾವತಿ ಮಾಡಬೇಕಿರುವ ಮೊತ್ತದಲ್ಲಿ ಬಿಐಎಎಲ್ ₹ 7.32 ಕೋಟಿ ಪಾವತಿ ಮಾಡಿದೆ’ ಎಂದು ಪೊನ್ನಣ್ಣ ವಿವರಿಸಿದರು.</p>.<p><strong>ಮಾರ್ಗದರ್ಶಿ ಸೂತ್ರ ರೂಪಿಸಿ: </strong>‘ಪಂಚಾಯಿತಿಗಳು ತೆರಿಗೆ ವಿಧಿಸುವ ಕುರಿತಂತೆ ಮುಂದಿನ ಮೂರು ತಿಂಗಳಿನಲ್ಲಿ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರಚಿಸಿ’ ಎಂದು ನ್ಯಾಯಪೀಠವು ಪೊನ್ನಣ್ಣ ಅವರಿಗೆ ನಿರ್ದೇಶಿಸಿತು. ವಿಚಾರಣೆಯನ್ನು 2018ರ ಏಪ್ರಿಲ್ 2ಕ್ಕೆ ಮುಂದೂಡಲಾಗಿದೆ.</p>.<p>ವಿಚಾರಣೆ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾ ದೇವಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>