ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ಅವರು ಕನ್ನಡಕ ತರುವುದಕ್ಕಾಗಿ ಮಂಗಳವಾರ ರಾತ್ರಿಯೇ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿನಿಂದ ಬುಧವಾರ ಹೆಲಿಕಾಪ್ಟರ್ ಮೂಲಕ ಕನ್ನಡಕವನ್ನು ತಂದು ತಲುಪಿಸಿದರು. ಬುಧವಾರ ಯಾವುದೇ ಸಮಾರಂಭ ಇರಲಿಲ್ಲ. ಡಿ.14 ರಂದು ಮಾನ್ವಿ ಮತ್ತು ಲಿಂಗಸುಗೂರುಗಳಲ್ಲಿ ಪರಿವರ್ತನಾ ಯಾತ್ರೆ ನಡೆಯಲಿದ್ದು, ಯಡಿಯೂರಪ್ಪ ಅವರು ಭಾಗವಹಿಸುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.