ಸೈನಿಕರ ಶೋಧ ಕಾರ್ಯಾಚರಣೆಗೆ ಹಿಮಪಾತ ಅಡ್ಡಿ

ಶ್ರೀನಗರ: ನಾಪತ್ತೆಯಾಗಿರುವ ಐವರು ಸೈನಿಕರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಭಾರಿ ಹಿಮಪಾತ ಮತ್ತು ಹವಾಮಾನ ವೈಪರೀತ್ಯ ಅಡ್ಡಿ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಸಂಭವಿಸಿದ ಭಾರಿ ಹಿಮಕುಸಿತದಲ್ಲಿ ಐವರು ಸೈನಿಕರು ನಾಪತ್ತೆಯಾಗಿದ್ದರು.
ಸೋಮವಾರ ತಡರಾತ್ರಿ ಉಂಟಾದ ಭಾರಿ ಹಿಮಕುಸಿತದಿಂದಾಗಿ ಕುಪ್ವಾರಾ ಜಿಲ್ಲೆಯ ನೌವ್ಗಾಮ್ ಪ್ರಾಂತ್ಯದ ಕಡಿದಾದ ಕಣಿವೆಯಲ್ಲಿ ಇಬ್ಬರು ಸೈನಿಕರು ಜಾರಿ ಬಿದ್ದಿದ್ದರು. ಗುರೆಝ್ ಕಣಿವೆಯ ಕಂಜಲ್ವಾನ್ ಉಪಪ್ರಾಂತ್ಯದಲ್ಲಿ ಮೂವರು ಸೈನಿಕರು ನಾಪತ್ತೆಯಾಗಿದ್ದರು.
‘ನೌವ್ಗಾಮ್ ಮತ್ತು ಗುರೆಝ್ ಕಣಿವೆಯಲ್ಲಿ ಮಂಗಳವಾರದಿಂದ ಶೋಧಕಾರ್ಯ ನಡೆಸಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.