<p><strong>ಬೆಂಗಳೂರು:</strong> ರಾಜ್ಯ ಸರ್ಕಾರವು ‘2030 ವಾಟರ್ ರಿಸೋರ್ಸ್ ಗ್ರೂಪ್’ ಕೈಗೆತ್ತಿಕೊಂಡಿರುವ ‘ರಾಮತಳ ಮಾರ್ಕೆಟ್ ಲಿಂಕೇಜ್’ ಯೋಜನೆಗೆ ಕೈಜೋಡಿಸಲು 7 ಖಾಸಗಿ ಕಂಪನಿಗಳು ಬುಧವಾರ ನಗರದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು.</p>.<p>ರೈತರಿಗೆ ತುಂತುರು ಹನಿ ನೀರಾವರಿ ಸೌಲಭ್ಯ ಒದಗಿಸಲು ಮತ್ತು ಈ ಪ್ರದೇಶದಲ್ಲಿ ಬೆಳೆದ ಬೆಳೆಗಳನ್ನು ಖಾಸಗಿ ಕಂಪನಿಗಳು ನೇರವಾಗಿ ಖರೀದಿಸಲು ಅನುಕೂಲವಾಗುವಂತೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ರಾಮತಳದಲ್ಲಿ ಈ ಯೋಜನೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ.</p>.<p>ಮಹಾ ಅಗ್ರಿಕಲ್ಚರ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್, ರಾವಿಸ್ ನ್ಯೂಟ್ರಿಷನ್, ಪಳಿನಿಯಪ್ಪ ಪೌಲ್ಟ್ರಿ ಫಾರ್ಮ್, ಕೆನ್ ಅಗ್ರಿಟೆಕ್ ಪ್ರೈವೇಟ್ ಲಿಮಿಟೆಡ್, ರೀಟ್ಜಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಜೀವಭೂಮಿ ಕಂಪೆನಿಗಳ ಪ್ರತಿನಿಧಿಗಳು ಸರ್ಕಾರದ ಜತೆಗಿನ ಒಪ್ಪಂದಕ್ಕೆ ಸಹಿ ಹಾಕಿದರು.</p>.<p>ಕೃಷ್ಣ ಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ಕೃಷಿ ಮತ್ತು ತೋಟಗಾರಿಗೆ ಇಲಾಖೆ ಕಾರ್ಯದರ್ಶಿ ಮಹೇಶ್ವರ್ ರಾವ್ ಸರ್ಕಾರದ ಪರವಾಗಿ ಒಪ್ಪಂದಕ್ಕೆ ಸಹಿ ಮಾಡಿದರು. ಕಳೆದ ಜುಲೈನಲ್ಲಿ 6 ಕಂಪನಿಗಳ ಜತೆಗೆ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು.</p>.<p>‘ರಾಮತಳ’ ಯೋಜನೆಗೆ ರಾಜ್ಯ ಸರ್ಕಾರ 15,000 ರೈತರನ್ನು ಒಳಗೊಳ್ಳುವಂತೆ ₹800 ಕೋಟಿ ವಿನಿಯೋಗಿಸಿ 24,000 ಹೆಕ್ಟೇರ್ಗೆ ತುಂತುರು ಹನಿ ನೀರಾವರಿ ಸೌಲಭ್ಯ ಕಲ್ಪಿಸಿದೆ. ಈ ಪ್ರದೇಶದಲ್ಲಿ ರೈತರು ಬೆಳೆಯುವ ಬೆಳೆಗಳಿಗೆ ಉತ್ತಮ ಬೆಲೆ ಮತ್ತು ಮಾರುಕಟ್ಟೆ ಸೌಲಭ್ಯವನ್ನೂ ಒದಗಿಸಲು ‘ಡ್ರಿಪ್ ಟು ಮಾರ್ಕೆಟ್’ ಪರಿಕಲ್ಪನೆಯಡಿ ಖಾಸಗಿ ಕಂಪನಿಗಳು ರೈತರ ಬಳಿಗೇ ಹೋಗಿ ಸಂಸ್ಕರಣಾ ಘಟಕ, ಶೈತ್ಯಾಗಾರ ಮತ್ತು ಕಚೇರಿ ಆರಂಭಿಸಿ, ಬೆಳೆಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗುತ್ತಿದೆ.</p>.<p>ಅಂಜುಂ ಪರ್ವೇಜ್ ಮಾತನಾಡಿ, ‘ಕೊಪ್ಪಳದಲ್ಲಿ 1.12 ಲಕ್ಷ ಹೆಕ್ಟೇರ್ ಭೂಮಿಯನ್ನು ತುಂತುರು ಹನಿ ನೀರಾವರಿಗೆ ಒಳಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. 7ರಿಂದ 8 ವರ್ಷಗಳಲ್ಲಿ 5 ಲಕ್ಷ ಹೆಕ್ಟೇರ್ ಭೂಮಿ ತುಂತುರು ಹನಿ ನೀರಾವರಿಗೆ ಒಳಪಡಿಸಲು ಸುಮಾರು ₹28,000 ಕೋಟಿ ವಿನಿಯೋಗಿಸುವ ಯೋಜನೆ ಹೊಂದಿದ್ದೇವೆ’ ಎಂದು ತಿಳಿಸಿದರು.</p>.<p>‘ರೈತರು ಮತ್ತು ಖಾಸಗಿ ಕಂಪನಿಗಳ ಪರಸ್ಪರ ಸಂವಹನ ಮತ್ತು ಸಂಪರ್ಕಕ್ಕೆ ‘ನಮ್ಮ ಡ್ರಿಪ್’ ಆನ್ಲೈನ್ ಪೋರ್ಟಲ್ ರೂಪಿಸಲಾಗುತ್ತಿದೆ. ಈ ಪೋರ್ಟಲ್ 6 ತಿಂಗಳೊಳಗೆ ಸಿದ್ಧವಾಗಲಿದ್ದು, ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ. ಖಾಸಗಿ ಕಂಪನಿಗಳು ರೈತರನ್ನು ನೇರವಾಗಿ ಸಂಪರ್ಕಿಸಲು, ರೈತರು ತಮಗೆ ಬೇಕಾದ ರಸಗೊಬ್ಬರ, ಬಿತ್ತನೆ ಬೀಜ, ಯಂತ್ರೋಪಕರಣ ಖರೀದಿಸಲು ನೇರವಾಗಿ ಕಂಪನಿಗಳನ್ನು ಸಂಪರ್ಕಿಸಲು ಈ ಪೋರ್ಟಲ್ ವೇದಿಕೆ ಒದಗಿಸಲಿದೆ’ ಎಂದು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯ ಸರ್ಕಾರವು ‘2030 ವಾಟರ್ ರಿಸೋರ್ಸ್ ಗ್ರೂಪ್’ ಕೈಗೆತ್ತಿಕೊಂಡಿರುವ ‘ರಾಮತಳ ಮಾರ್ಕೆಟ್ ಲಿಂಕೇಜ್’ ಯೋಜನೆಗೆ ಕೈಜೋಡಿಸಲು 7 ಖಾಸಗಿ ಕಂಪನಿಗಳು ಬುಧವಾರ ನಗರದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು.</p>.<p>ರೈತರಿಗೆ ತುಂತುರು ಹನಿ ನೀರಾವರಿ ಸೌಲಭ್ಯ ಒದಗಿಸಲು ಮತ್ತು ಈ ಪ್ರದೇಶದಲ್ಲಿ ಬೆಳೆದ ಬೆಳೆಗಳನ್ನು ಖಾಸಗಿ ಕಂಪನಿಗಳು ನೇರವಾಗಿ ಖರೀದಿಸಲು ಅನುಕೂಲವಾಗುವಂತೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ರಾಮತಳದಲ್ಲಿ ಈ ಯೋಜನೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ.</p>.<p>ಮಹಾ ಅಗ್ರಿಕಲ್ಚರ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್, ರಾವಿಸ್ ನ್ಯೂಟ್ರಿಷನ್, ಪಳಿನಿಯಪ್ಪ ಪೌಲ್ಟ್ರಿ ಫಾರ್ಮ್, ಕೆನ್ ಅಗ್ರಿಟೆಕ್ ಪ್ರೈವೇಟ್ ಲಿಮಿಟೆಡ್, ರೀಟ್ಜಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಜೀವಭೂಮಿ ಕಂಪೆನಿಗಳ ಪ್ರತಿನಿಧಿಗಳು ಸರ್ಕಾರದ ಜತೆಗಿನ ಒಪ್ಪಂದಕ್ಕೆ ಸಹಿ ಹಾಕಿದರು.</p>.<p>ಕೃಷ್ಣ ಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ಕೃಷಿ ಮತ್ತು ತೋಟಗಾರಿಗೆ ಇಲಾಖೆ ಕಾರ್ಯದರ್ಶಿ ಮಹೇಶ್ವರ್ ರಾವ್ ಸರ್ಕಾರದ ಪರವಾಗಿ ಒಪ್ಪಂದಕ್ಕೆ ಸಹಿ ಮಾಡಿದರು. ಕಳೆದ ಜುಲೈನಲ್ಲಿ 6 ಕಂಪನಿಗಳ ಜತೆಗೆ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು.</p>.<p>‘ರಾಮತಳ’ ಯೋಜನೆಗೆ ರಾಜ್ಯ ಸರ್ಕಾರ 15,000 ರೈತರನ್ನು ಒಳಗೊಳ್ಳುವಂತೆ ₹800 ಕೋಟಿ ವಿನಿಯೋಗಿಸಿ 24,000 ಹೆಕ್ಟೇರ್ಗೆ ತುಂತುರು ಹನಿ ನೀರಾವರಿ ಸೌಲಭ್ಯ ಕಲ್ಪಿಸಿದೆ. ಈ ಪ್ರದೇಶದಲ್ಲಿ ರೈತರು ಬೆಳೆಯುವ ಬೆಳೆಗಳಿಗೆ ಉತ್ತಮ ಬೆಲೆ ಮತ್ತು ಮಾರುಕಟ್ಟೆ ಸೌಲಭ್ಯವನ್ನೂ ಒದಗಿಸಲು ‘ಡ್ರಿಪ್ ಟು ಮಾರ್ಕೆಟ್’ ಪರಿಕಲ್ಪನೆಯಡಿ ಖಾಸಗಿ ಕಂಪನಿಗಳು ರೈತರ ಬಳಿಗೇ ಹೋಗಿ ಸಂಸ್ಕರಣಾ ಘಟಕ, ಶೈತ್ಯಾಗಾರ ಮತ್ತು ಕಚೇರಿ ಆರಂಭಿಸಿ, ಬೆಳೆಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗುತ್ತಿದೆ.</p>.<p>ಅಂಜುಂ ಪರ್ವೇಜ್ ಮಾತನಾಡಿ, ‘ಕೊಪ್ಪಳದಲ್ಲಿ 1.12 ಲಕ್ಷ ಹೆಕ್ಟೇರ್ ಭೂಮಿಯನ್ನು ತುಂತುರು ಹನಿ ನೀರಾವರಿಗೆ ಒಳಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. 7ರಿಂದ 8 ವರ್ಷಗಳಲ್ಲಿ 5 ಲಕ್ಷ ಹೆಕ್ಟೇರ್ ಭೂಮಿ ತುಂತುರು ಹನಿ ನೀರಾವರಿಗೆ ಒಳಪಡಿಸಲು ಸುಮಾರು ₹28,000 ಕೋಟಿ ವಿನಿಯೋಗಿಸುವ ಯೋಜನೆ ಹೊಂದಿದ್ದೇವೆ’ ಎಂದು ತಿಳಿಸಿದರು.</p>.<p>‘ರೈತರು ಮತ್ತು ಖಾಸಗಿ ಕಂಪನಿಗಳ ಪರಸ್ಪರ ಸಂವಹನ ಮತ್ತು ಸಂಪರ್ಕಕ್ಕೆ ‘ನಮ್ಮ ಡ್ರಿಪ್’ ಆನ್ಲೈನ್ ಪೋರ್ಟಲ್ ರೂಪಿಸಲಾಗುತ್ತಿದೆ. ಈ ಪೋರ್ಟಲ್ 6 ತಿಂಗಳೊಳಗೆ ಸಿದ್ಧವಾಗಲಿದ್ದು, ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ. ಖಾಸಗಿ ಕಂಪನಿಗಳು ರೈತರನ್ನು ನೇರವಾಗಿ ಸಂಪರ್ಕಿಸಲು, ರೈತರು ತಮಗೆ ಬೇಕಾದ ರಸಗೊಬ್ಬರ, ಬಿತ್ತನೆ ಬೀಜ, ಯಂತ್ರೋಪಕರಣ ಖರೀದಿಸಲು ನೇರವಾಗಿ ಕಂಪನಿಗಳನ್ನು ಸಂಪರ್ಕಿಸಲು ಈ ಪೋರ್ಟಲ್ ವೇದಿಕೆ ಒದಗಿಸಲಿದೆ’ ಎಂದು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>