ಕಾರ್ಯಾಚರಣೆಯಲ್ಲಿ ಬಂಡೀಪುರದ ಅಭಯಾರಣ್ಯದ ಡಾ. ನಾಗರಾಜ್, ನಾಗರಹೊಳೆ ಆನೆಧಾಮದ ಡಾ. ಮುಜೀಬ್, ಶಿವಮೊಗ್ಗದ ವಿನಯ್ಕುಮಾರ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಕೆ.ಸಿಂಹ, ಡಿಎಫ್ಒ ಮಂಜುನಾಥ್, ಎಸಿಎಫ್ ಲಿಂಗರಾಜ್, ವಲಯ ಅರಣ್ಯ ಅಧಿಕಾರಿ ಮೋಹನ್, ಯಸಳೂರು ವಲಯ ಅಧಿಕಾರಿ ಅಭಿಲಾಷ್ ಇದ್ದರು. ತಾತ್ಕಾಲಿಕವಾಗಿ ಎರಡು ಕಾಡಾನೆ ಹಿಡಿಯಲು ಸರ್ಕಾರ ಆದೇಶಿಸಿತ್ತು. ಅದರಂತೆ ಅರಣ್ಯ ಇಲಾಖೆ ಎರಡು ಕಾಡಾನೆ ಹಿಡಿದು ಆನೆ ಶಿಬಿರಕ್ಕೆ ಕಳುಹಿಸಿದ್ದಾರೆ.