ಟಿಕೆಟ್ ಆಕಾಂಕ್ಷಿಯಾಗಿರುವ ಎಚ್.ಎಂ.ಗೋಪಿಕೃಷ್ಣ ಅವರು ಶುಭಾಶಯ ಕೋರಿ ಹಾಕಿದ್ದ ಫ್ಲೆಕ್ಸನ್ನು ಒಂದು ಗುಂಪಿನವರು ಹರಿದು ಹಾಕಿದ್ದಾರೆ ಎಂಬ ವಿಷಯದಲ್ಲಿ ಎರಡು ಗುಂಪುಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಸೋಮವಾರ ಮಧ್ಯಾಹ್ನ ವೇದಿಕೆ ಬಳಿ ಕಾರ್ಯಕ್ರಮಕ್ಕೆ ಹಾಕಿದ್ದ ಕುರ್ಚಿಗಳನ್ನು ಇನ್ನೊಂದು ಗುಂಪು ಮುರಿದು ಹಾಕಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದ್ದಾರೆ.