<p><strong>ಮುಜಾಫರ್ ನಗರ್:</strong> ನಮ್ಮ ದೇಶವನ್ನು ಹಿಂದೂಸ್ತಾನ್ ಎಂದು ಕರೆಯುತ್ತೇವೆ, ಹಾಗೆಂದರೆ ಹಿಂದೂಗಳಿಗೆ ಇರುವ ದೇಶ ಇದು ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ವಿಕ್ರಂ ಸೈನಿ ಹೇಳಿದ್ದಾರೆ.</p>.<p>ಮುಜಾಫರ್ ನಗರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೈನಿ, ನಾನು ಹಿಂದುತ್ವದ ಮೇಲೆ ಬಲವಾದ ನಂಬಿಕೆ ಹೊಂದಿದ್ದೇನೆ. ನಮ್ಮ ದೇಶ ಹಿಂದೂಸ್ತಾನ್ ಎಂದು ಕರೆಯಲ್ಪಡುತ್ತದೆ. ಹಾಗೆಂದರೆ ಹಿಂದೂಗಳಿಗಾಗಿರುವ ದೇಶ, ಇಂದು ಯಾವುದೇ ತಾರತಮ್ಯ ಇಲ್ಲದೆಯೇ ಎಲ್ಲರೂ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ ಎಂದಿದ್ದಾರೆ.</p>.<p>ಅದೇ ವೇಳೆ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದ ಸೈನಿ, ಈ ಹಿಂದೆ ಉದ್ದ ಗಡ್ಡದ, ದೊಡ್ಡ ಚೆಕ್ ಹೊಂದಿದವರು ಇಲ್ಲಿದ್ದರು ಎಂದಿದ್ದಾರೆ.<br /> ಈ ಹಿಂದಿನ ಸರ್ಕಾರ ಮುಸ್ಲಿಮರಿಗೆ ಮಾತ್ರ ಸೌಲಭ್ಯಗಳನ್ನು ನೀಡುತ್ತಿತ್ತು ಎಂದು ಆರೋಪಿಸಿದ ಬಿಜೆಪಿ ನಾಯಕ ಕೆಲವು ತಲೆ ಹಿಡುಕರು ಗಡ್ಡಧಾರಿಗಳನ್ನು ಉಳಿಸಿಕೊಂಡಿದ್ದರು. ಅದರಿಂದಾಗಿಯೇ ನಮಗೆ ಇವತ್ತು ಆಪತ್ತು ಬಂದಿದ್ದು. ಅವರು ಹೋದ ನಂತರವೇ ನಮಗೆ ರಾಜ್ಯ ಸಿಕ್ಕಿದ್ದು ಎಂದು ಈ ಹಿಂದೆ ರಾಜ್ಯದಲ್ಲಿ ಅಧಿಕಾರವಿದ್ದ ಸಮಾಜವಾದಿ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.</p>.<p>ಸೋಮವಾರ ರಾಜಸ್ಥಾನದ ಅಲ್ವಾರ್ ಕ್ಷೇತ್ರದ ಬಿಜೆಪಿ ಶಾಸಕ ಬನ್ವಾರಿ ಲಾಲ್, ಮುಸ್ಲಿಮರು 12-14 ಮಕ್ಕಳನ್ನು ಹೆರುತ್ತಾರೆ. ಆದರೆ ಹಿಂದೂಗಳಿಗೆ ಒಂದು ಅಥವಾ ಎರಡು ಮಕ್ಕಳು ಸಾಕು ಎಂದು ನಿಯಂತ್ರಣ ಹೇರಲಾಗುತ್ತದೆ ಎಂದು ಫೇಸ್ಬುಕ್ನಲ್ಲಿ ಬರೆದು ವಿವಾದಕ್ಕೀಡಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಜಾಫರ್ ನಗರ್:</strong> ನಮ್ಮ ದೇಶವನ್ನು ಹಿಂದೂಸ್ತಾನ್ ಎಂದು ಕರೆಯುತ್ತೇವೆ, ಹಾಗೆಂದರೆ ಹಿಂದೂಗಳಿಗೆ ಇರುವ ದೇಶ ಇದು ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ವಿಕ್ರಂ ಸೈನಿ ಹೇಳಿದ್ದಾರೆ.</p>.<p>ಮುಜಾಫರ್ ನಗರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೈನಿ, ನಾನು ಹಿಂದುತ್ವದ ಮೇಲೆ ಬಲವಾದ ನಂಬಿಕೆ ಹೊಂದಿದ್ದೇನೆ. ನಮ್ಮ ದೇಶ ಹಿಂದೂಸ್ತಾನ್ ಎಂದು ಕರೆಯಲ್ಪಡುತ್ತದೆ. ಹಾಗೆಂದರೆ ಹಿಂದೂಗಳಿಗಾಗಿರುವ ದೇಶ, ಇಂದು ಯಾವುದೇ ತಾರತಮ್ಯ ಇಲ್ಲದೆಯೇ ಎಲ್ಲರೂ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ ಎಂದಿದ್ದಾರೆ.</p>.<p>ಅದೇ ವೇಳೆ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದ ಸೈನಿ, ಈ ಹಿಂದೆ ಉದ್ದ ಗಡ್ಡದ, ದೊಡ್ಡ ಚೆಕ್ ಹೊಂದಿದವರು ಇಲ್ಲಿದ್ದರು ಎಂದಿದ್ದಾರೆ.<br /> ಈ ಹಿಂದಿನ ಸರ್ಕಾರ ಮುಸ್ಲಿಮರಿಗೆ ಮಾತ್ರ ಸೌಲಭ್ಯಗಳನ್ನು ನೀಡುತ್ತಿತ್ತು ಎಂದು ಆರೋಪಿಸಿದ ಬಿಜೆಪಿ ನಾಯಕ ಕೆಲವು ತಲೆ ಹಿಡುಕರು ಗಡ್ಡಧಾರಿಗಳನ್ನು ಉಳಿಸಿಕೊಂಡಿದ್ದರು. ಅದರಿಂದಾಗಿಯೇ ನಮಗೆ ಇವತ್ತು ಆಪತ್ತು ಬಂದಿದ್ದು. ಅವರು ಹೋದ ನಂತರವೇ ನಮಗೆ ರಾಜ್ಯ ಸಿಕ್ಕಿದ್ದು ಎಂದು ಈ ಹಿಂದೆ ರಾಜ್ಯದಲ್ಲಿ ಅಧಿಕಾರವಿದ್ದ ಸಮಾಜವಾದಿ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.</p>.<p>ಸೋಮವಾರ ರಾಜಸ್ಥಾನದ ಅಲ್ವಾರ್ ಕ್ಷೇತ್ರದ ಬಿಜೆಪಿ ಶಾಸಕ ಬನ್ವಾರಿ ಲಾಲ್, ಮುಸ್ಲಿಮರು 12-14 ಮಕ್ಕಳನ್ನು ಹೆರುತ್ತಾರೆ. ಆದರೆ ಹಿಂದೂಗಳಿಗೆ ಒಂದು ಅಥವಾ ಎರಡು ಮಕ್ಕಳು ಸಾಕು ಎಂದು ನಿಯಂತ್ರಣ ಹೇರಲಾಗುತ್ತದೆ ಎಂದು ಫೇಸ್ಬುಕ್ನಲ್ಲಿ ಬರೆದು ವಿವಾದಕ್ಕೀಡಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>