ಸುಗಮ ಸಂಗೀತ ಸಮ್ಮೇಳನದಲ್ಲಿ ಸಹಸ್ರಕಂಠಗಳಿಂದ ನಾಡಗೀತೆ ಗಾಯನ ನಡೆಯಿತು. ಲಯನ್ಸ್ ಶಾಲೆ, ಮಂಚಿಕೇರಿ ರಾಜರಾಜೇಶ್ವರಿ ಶಾಲೆ, ಎಂಇಎಸ್ ಶಾಲೆ, ಮಾರಿಕಾಂಬಾ ಪ್ರೌಢಶಾಲೆ, ಉಂಚಳ್ಳಿ, ಯಡಳ್ಳಿ, ಓಣಿಕೇರಿ ಶಾಲೆಯ 1000 ವಿದ್ಯಾರ್ಥಿಗಳು ಭಾಗಿಯಾದರು. ಗಾಯಕಿ ಬಿ.ಕೆ. ಸುಮಿತ್ರಾ, ಬಿ.ವಿ.ಶ್ರೀನಿವಾಸ ಅವರಿಂದ ಈ ಮಕ್ಕಳು ತರಬೇತಿ ಪಡೆದಿದ್ದಾರೆ.