ಲಾಹೋರ್: ಜಮಾತ್ –ಉದ್–ದುವಾ ಸಂಘಟನೆಗೆ ದೇಣಿಗೆ ಸಂಗ್ರಹಿಸದಂತೆ ನಿಷೇಧ ಹೇರಿರುವ ಬೆನ್ನಲ್ಲೇ ಸಂಘಟನೆಯ ಮುಖ್ಯಸ್ಥ, ಮುಂಬೈ ದಾಳಿಯ ರೂವಾರಿ, ಹಫೀಜ್ ಸಯೀದ್, ರಕ್ಷಣಾ ಸಚಿವ ಖುರ್ರಮ್ ದಸ್ತಗಿರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾನೆ. ತನ್ನ ಮಾನಹಾನಿ ಮಾಡಿದುದಕ್ಕೆ ₹10ಕೋಟಿ ಪರಿಹಾರ ನೀಡಬೇಕು ಕೋರಿದ್ದಾನೆ. ‘ಭಯೋತ್ಪಾದಕರಿಗೆ ಇಸ್ಲಾಮಾಬಾದ್ ಸ್ವರ್ಗವಾಗಿದೆ’ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪಾಕ್ ಎರಡು ದಿನಗಳ ಹಿಂದೆಯಷ್ಟೇ ಕೆಲವು ಸಂಘಟನೆಗಳಿಗೆ ದೇಣಿಗೆ ಸಂಗ್ರಹಿಸದಂತೆ ನಿಷೇಧ ಹೇರಿತ್ತು.