<p><strong>ಬೆಂಗಳೂರು: </strong>ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಮನೆಯಲ್ಲಿ ಬರೋಬ್ಬರಿ ₹ 13 ಲಕ್ಷ ಮೌಲ್ಯದ ಬಗೆಬಗೆಯ ಸೀರೆಗಳು ಪತ್ತೆಯಾಗಿವೆ!</p>.<p>ಅದಾಯ ಮೀರಿ ಆಸ್ತಿ ಗಳಿಸಿದ ಮಾಹಿತಿ ಆಧರಿಸಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿರುವ ಎಂಜಿನಿಯರ್ ವೆಂಕಟೇಶ್ ಮನೆ ಮತ್ತು ಕಚೇರಿ ಮೇಲೆ ಗುರುವಾರ(ಇದೇ 4ರಂದು) ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು, ಅಪಾರ ಪ್ರಮಾಣದ ಆಸ್ತಿ ಪತ್ತೆ ಹಚ್ಚಿದ್ದಾರೆ.</p>.<p>ವೆಂಕಟೇಶ್ಗೆ ಸೇರಿದ ನಾಲ್ಕು ನಿವೇಶನ, ಒಂದು ಮನೆ ಮತ್ತು ನಾಲ್ಕು ಎಕರೆ ಜಮೀನಿಗೆ(ಫಾರಂ) ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ₹ 4 ಲಕ್ಷ ಮೌಲ್ಯದ ವಿಮಾ ಪಾಲಿಸಿ ಬಾಂಡ್ಗಳು, ತಲಾ ಎರಡು ಕಾರು ಮತ್ತು ಬೈಕ್, ಒಂದೂವರೆ ಕೆ.ಜಿ ಚಿನ್ನ, ಮೂರು ಕೆ.ಜಿ ಬೆಳ್ಳಿ ವಸ್ತುಗಳು, ₹ 52,000 ನಗದು ಸಿಕ್ಕಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<p><strong>ವಿವಿಧ ಅಧಿಕಾರಿಗಳ ಬಳಿ ಪತ್ತೆಯಾದ ಆಸ್ತಿ ವಿವರ</strong></p>.<p>* ಬಿ.ಟಿ. ಕುಮಾರಸ್ವಾಮಿ, ಉಪ ವಿಭಾಗಾಧಿಕಾರಿ, ಬಳ್ಳಾರಿ</p>.<p>ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ 13 ಎಕರೆ ಜಮೀನು, ಒಂದೂವರೆ ಕೆ.ಜಿ ಚಿನ್ನ, 200 ಗ್ರಾಂ ಬೆಳ್ಳಿ ವಸ್ತುಗಳು, ₹ 4 ಲಕ್ಷ ನಗದು.</p>.<p>* ಎನ್.ಆರ್.ಎಂ. ನಾಗರಾಜನ್, ಕೆಪಿಟಿಸಿಎಲ್ ಸೂಪರಿಂಟೆಂಡೆಂಟ್ ಎಂಜಿನಿಯರ್, ಬೆಂಗಳೂರು</p>.<p>ಬೆಂಗಳೂರಿನಲ್ಲಿ ಎರಡು ಮನೆ, ಬೆಂಗಳೂರು, ರಾಯಚೂರು, ಹೊಸಪೇಟೆ ಮತ್ತು ಸಿಂಧನೂರಿನಲ್ಲಿ ಒಟ್ಟು 10 ನಿವೇಶನ, ಕಾರು, ಮೋಟಾರ್ ಬೈಕ್, 798 ಗ್ರಾಂ ಚಿನ್ನ, ಐದೂವರೆ ಕೆ.ಜಿ ಬೆಳ್ಳಿ ವಸ್ತುಗಳು ಹಾಗೂ ₹ 91,000 ನಗದು.</p>.<p>* ಬಿ.ಎಸ್. ಪ್ರಹ್ಲಾದ್, ಸೂಪರಿಂಟೆಂಡೆಂಟ್ ಎಂಜಿನಿಯರ್, ಬಿಬಿಎಂಪಿ, ಬೆಂಗಳೂರು</p>.<p>ಬೆಂಗಳೂರಿನಲ್ಲಿ ನಿವೇಶನ, ಎರಡು ಮನೆ, ಮೂರು ವಾಣಿಜ್ಯ ಕಟ್ಟಡ, 40 ಗುಂಟೆ ಜಮೀನು, ಚಿಕ್ಕಬಳ್ಳಾಪುರದಲ್ಲಿ ಐದು ನಿವೇಶನ, ಶಿಡ್ಲಘಟ್ಟ, ತುಮಕೂರಿನಲ್ಲಿ ಒಂದೊಂದು ನಿವೇಶನ, ಎರಡು ಕಾರು, ಬೈಕ್, 731 ಗ್ರಾಂ ಚಿನ್ನ, 865 ಗ್ರಾಂ ಬೆಳ್ಳಿ ವಸ್ತುಗಳು, ₹ 94,000 ನಗದು.</p>.<p>* ಆರ್.ವಿ. ಕಾಂತರಾಜು, ನಗರ ಯೋಜನೆ ಉಪನಿರ್ದೇಶಕ(ಬಿಡಿಎ), ಬೆಂಗಳೂರು</p>.<p>ಬೆಂಗಳೂರಿನಲ್ಲಿ ಐದು ಮನೆ, ರಾಮನಗರ ಜಿಲ್ಲೆಯಲ್ಲಿ 10 ಎಕರೆ ಕೃಷಿ ಜಮೀನು, ಕಾರು, ಬೈಕ್, ಒಂದೂವರೆ ಕೆ.ಜಿ ಚಿನ್ನ, ನಾಲ್ಕೂವರೆ ಕೆ.ಜಿ ಬೆಳ್ಳಿ ವಸ್ತುಗಳು, ₹ 37,000 ನಗದು.</p>.<p>* .ಎಸ್. ಬಾಲನ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕರ್ನಾಟಕ ನೀರಾವರಿ ನಿಗಮ, ಭದ್ರವತಿ.</p>.<p>ಹೊನ್ನಾವರದಲ್ಲಿ ನಾಲ್ಕು ಮನೆ, ಬೆಂಗಳೂರಿನಲ್ಲಿ ಮನೆ, ದಾವಣಗೆರೆಯ ವಿವಿಧೆಡೆ 14 ಎಕರೆ 8 ಗುಂಟೆ ಜಮೀನು, ಮೂರು ಕಾರು, ಎರಡು ಬೈಕ್, ₹ 5 ಲಕ್ಷ ಮೌಲ್ಯದ ಆಭರಣ, ₹ 4 ಲಕ್ಷ ಮೌಲ್ಯದ ಗೃಹಬಳಕೆ ವಸ್ತುಗಳು.</p>.<p>* ಜೆ.ಸಿ. ಜಗದೀಶಪ್ಪ, ಕೆಪಿಟಿಸಿಎಲ್ ಸಹಾಯಕ ಕಾರ್ಯಪಾಲಕ ಎಂಜಿನಿ ಯರ್, ಹೊನ್ನಾಳಿ.</p>.<p>ದಾವಣಗೆರೆಯಲ್ಲಿ ಐದು ನಿವೇಶನ, ಶಿವಮೊಗ್ಗದಲ್ಲಿ ಎರಡು ನಿವೇಶನ, ಬೆಂಗಳೂರಿನಲ್ಲಿ ನಿವೇಶನ, ಧಾರವಾಡದಲ್ಲಿ ಎರಡು ಫ್ಲಾಟ್, ಕಾರು, ಎರಡು ಬೈಕ್, 196 ಗ್ರಾಂ ಚಿನ್ನ, 180 ಗ್ರಾಂ ಬೆಳ್ಳಿ ವಸ್ತುಗಳು.</p>.<p>* ಅಶೋಕಗೌಡಪ್ಪ ಪಾಟೀಲ, ನರಗುಂದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ,<br /> ಗದಗ ಜಿಲ್ಲೆ</p>.<p>ವಿವಿಧೆಡೆ ಎರಡು ನಿವೇಶನ, 815 ಗ್ರಾಂ ಚಿನ್ನ, 2 ಕೆ.ಜಿ 600 ಗ್ರಾಂ ಬೆಳ್ಳಿ ವಸ್ತುಗಳು.</p>.<p>* ಸೋಮಪ್ಪ ಟಿ. ಲಮಾಣಿ, ವಿಜಯಪುರ ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಶಾಖಾಧೀಕ್ಷಕ</p>.<p>ವಿವಿಧೆಡೆ ಎರಡು ನಿವೇಶನ, 4 ಎಕರೆ 20 ಗುಂಟೆ ಜಮೀನು, ಕಾರು, ಬೈಕ್, ₹ 8 ಲಕ್ಷ ಬ್ಯಾಂಕ್ ಠೇವಣಿ.</p>.<p>* ನರಸಿಂಹಲು, ತೆರಿಗೆ ಮೌಲ್ಯಮಾಪಕ, ಬಿಬಿಎಂಪಿ ಸಿ.ವಿ. ರಾಮನ್ನಗರ ಉಪವಿಭಾಗ, ಬೆಂಗಳೂರು</p>.<p>ಬೆಂಗಳೂರಿನಲ್ಲಿ ಮೂರು ಮನೆ, ನಾಲ್ಕು ನಿವೇಶನ, ವಾಣಿಜ್ಯ ಕಟ್ಟಡ, ಕಾರು, ಎರಡು ಬೈಕ್, 300 ಗ್ರಾಂ ಚಿನ್ನ, 900 ಗ್ರಾಂ ಬೆಳ್ಳಿ ವಸ್ತುಗಳು.</p>.<p>* ಅಮರೇಶ ಬೆಂಚಮರಡಿ, ನಗರಸಭೆ ಸ್ಯಾನಿಟರಿ ಇನ್ಸ್ಪೆಕ್ಟರ್, ರಾಯಚೂರು</p>.<p>ವಿವಿಧೆಡೆ ಎರಡು ಫ್ಲಾಟ್, ₹ 5 ಲಕ್ಷ ಬೆಲೆಯ ಗೃಹ ಬಳಕೆ ವಸ್ತುಗಳು, ವಾಹನಗಳು, 530 ಗ್ರಾಂ ಚಿನ್ನ, 4 ಕೆ.ಜಿ 900 ಗ್ರಾಂ ಬೆಳ್ಳಿ ವಸ್ತುಗಳು, ₹ 5.67 ಲಕ್ಷ ನಗದು.</p>.<p><strong>ಪಿಡಿಒ 8 ನಿವೇಶನಗಳ ಒಡತಿ</strong></p>.<p>ನೆಲಮಂಗಲ ತಾಲ್ಲೂಕಿನ ವಾಜರಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರೇಖಾ, ನೆಲಮಂಗಲದಲ್ಲಿ ನಾಲ್ಕು ಅಂತಸ್ತಿನ ಮನೆ, 8 ನಿವೇಶನಕ್ಕೆ ಒಡತಿ. ಕಾರು, ಎರಡು ಬೈಕ್, ₹ 34.4 ಲಕ್ಷ ಬ್ಯಾಂಕ್ ಠೇವಣಿ, 264 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ, ಬ್ಯಾಂಕ್ ಖಾತೆಯಲ್ಲಿ ₹ 1.7 ಲಕ್ಷ, ₹ 55,000 ನಗದು ಪತ್ತೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಮನೆಯಲ್ಲಿ ಬರೋಬ್ಬರಿ ₹ 13 ಲಕ್ಷ ಮೌಲ್ಯದ ಬಗೆಬಗೆಯ ಸೀರೆಗಳು ಪತ್ತೆಯಾಗಿವೆ!</p>.<p>ಅದಾಯ ಮೀರಿ ಆಸ್ತಿ ಗಳಿಸಿದ ಮಾಹಿತಿ ಆಧರಿಸಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿರುವ ಎಂಜಿನಿಯರ್ ವೆಂಕಟೇಶ್ ಮನೆ ಮತ್ತು ಕಚೇರಿ ಮೇಲೆ ಗುರುವಾರ(ಇದೇ 4ರಂದು) ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು, ಅಪಾರ ಪ್ರಮಾಣದ ಆಸ್ತಿ ಪತ್ತೆ ಹಚ್ಚಿದ್ದಾರೆ.</p>.<p>ವೆಂಕಟೇಶ್ಗೆ ಸೇರಿದ ನಾಲ್ಕು ನಿವೇಶನ, ಒಂದು ಮನೆ ಮತ್ತು ನಾಲ್ಕು ಎಕರೆ ಜಮೀನಿಗೆ(ಫಾರಂ) ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ₹ 4 ಲಕ್ಷ ಮೌಲ್ಯದ ವಿಮಾ ಪಾಲಿಸಿ ಬಾಂಡ್ಗಳು, ತಲಾ ಎರಡು ಕಾರು ಮತ್ತು ಬೈಕ್, ಒಂದೂವರೆ ಕೆ.ಜಿ ಚಿನ್ನ, ಮೂರು ಕೆ.ಜಿ ಬೆಳ್ಳಿ ವಸ್ತುಗಳು, ₹ 52,000 ನಗದು ಸಿಕ್ಕಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<p><strong>ವಿವಿಧ ಅಧಿಕಾರಿಗಳ ಬಳಿ ಪತ್ತೆಯಾದ ಆಸ್ತಿ ವಿವರ</strong></p>.<p>* ಬಿ.ಟಿ. ಕುಮಾರಸ್ವಾಮಿ, ಉಪ ವಿಭಾಗಾಧಿಕಾರಿ, ಬಳ್ಳಾರಿ</p>.<p>ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ 13 ಎಕರೆ ಜಮೀನು, ಒಂದೂವರೆ ಕೆ.ಜಿ ಚಿನ್ನ, 200 ಗ್ರಾಂ ಬೆಳ್ಳಿ ವಸ್ತುಗಳು, ₹ 4 ಲಕ್ಷ ನಗದು.</p>.<p>* ಎನ್.ಆರ್.ಎಂ. ನಾಗರಾಜನ್, ಕೆಪಿಟಿಸಿಎಲ್ ಸೂಪರಿಂಟೆಂಡೆಂಟ್ ಎಂಜಿನಿಯರ್, ಬೆಂಗಳೂರು</p>.<p>ಬೆಂಗಳೂರಿನಲ್ಲಿ ಎರಡು ಮನೆ, ಬೆಂಗಳೂರು, ರಾಯಚೂರು, ಹೊಸಪೇಟೆ ಮತ್ತು ಸಿಂಧನೂರಿನಲ್ಲಿ ಒಟ್ಟು 10 ನಿವೇಶನ, ಕಾರು, ಮೋಟಾರ್ ಬೈಕ್, 798 ಗ್ರಾಂ ಚಿನ್ನ, ಐದೂವರೆ ಕೆ.ಜಿ ಬೆಳ್ಳಿ ವಸ್ತುಗಳು ಹಾಗೂ ₹ 91,000 ನಗದು.</p>.<p>* ಬಿ.ಎಸ್. ಪ್ರಹ್ಲಾದ್, ಸೂಪರಿಂಟೆಂಡೆಂಟ್ ಎಂಜಿನಿಯರ್, ಬಿಬಿಎಂಪಿ, ಬೆಂಗಳೂರು</p>.<p>ಬೆಂಗಳೂರಿನಲ್ಲಿ ನಿವೇಶನ, ಎರಡು ಮನೆ, ಮೂರು ವಾಣಿಜ್ಯ ಕಟ್ಟಡ, 40 ಗುಂಟೆ ಜಮೀನು, ಚಿಕ್ಕಬಳ್ಳಾಪುರದಲ್ಲಿ ಐದು ನಿವೇಶನ, ಶಿಡ್ಲಘಟ್ಟ, ತುಮಕೂರಿನಲ್ಲಿ ಒಂದೊಂದು ನಿವೇಶನ, ಎರಡು ಕಾರು, ಬೈಕ್, 731 ಗ್ರಾಂ ಚಿನ್ನ, 865 ಗ್ರಾಂ ಬೆಳ್ಳಿ ವಸ್ತುಗಳು, ₹ 94,000 ನಗದು.</p>.<p>* ಆರ್.ವಿ. ಕಾಂತರಾಜು, ನಗರ ಯೋಜನೆ ಉಪನಿರ್ದೇಶಕ(ಬಿಡಿಎ), ಬೆಂಗಳೂರು</p>.<p>ಬೆಂಗಳೂರಿನಲ್ಲಿ ಐದು ಮನೆ, ರಾಮನಗರ ಜಿಲ್ಲೆಯಲ್ಲಿ 10 ಎಕರೆ ಕೃಷಿ ಜಮೀನು, ಕಾರು, ಬೈಕ್, ಒಂದೂವರೆ ಕೆ.ಜಿ ಚಿನ್ನ, ನಾಲ್ಕೂವರೆ ಕೆ.ಜಿ ಬೆಳ್ಳಿ ವಸ್ತುಗಳು, ₹ 37,000 ನಗದು.</p>.<p>* .ಎಸ್. ಬಾಲನ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕರ್ನಾಟಕ ನೀರಾವರಿ ನಿಗಮ, ಭದ್ರವತಿ.</p>.<p>ಹೊನ್ನಾವರದಲ್ಲಿ ನಾಲ್ಕು ಮನೆ, ಬೆಂಗಳೂರಿನಲ್ಲಿ ಮನೆ, ದಾವಣಗೆರೆಯ ವಿವಿಧೆಡೆ 14 ಎಕರೆ 8 ಗುಂಟೆ ಜಮೀನು, ಮೂರು ಕಾರು, ಎರಡು ಬೈಕ್, ₹ 5 ಲಕ್ಷ ಮೌಲ್ಯದ ಆಭರಣ, ₹ 4 ಲಕ್ಷ ಮೌಲ್ಯದ ಗೃಹಬಳಕೆ ವಸ್ತುಗಳು.</p>.<p>* ಜೆ.ಸಿ. ಜಗದೀಶಪ್ಪ, ಕೆಪಿಟಿಸಿಎಲ್ ಸಹಾಯಕ ಕಾರ್ಯಪಾಲಕ ಎಂಜಿನಿ ಯರ್, ಹೊನ್ನಾಳಿ.</p>.<p>ದಾವಣಗೆರೆಯಲ್ಲಿ ಐದು ನಿವೇಶನ, ಶಿವಮೊಗ್ಗದಲ್ಲಿ ಎರಡು ನಿವೇಶನ, ಬೆಂಗಳೂರಿನಲ್ಲಿ ನಿವೇಶನ, ಧಾರವಾಡದಲ್ಲಿ ಎರಡು ಫ್ಲಾಟ್, ಕಾರು, ಎರಡು ಬೈಕ್, 196 ಗ್ರಾಂ ಚಿನ್ನ, 180 ಗ್ರಾಂ ಬೆಳ್ಳಿ ವಸ್ತುಗಳು.</p>.<p>* ಅಶೋಕಗೌಡಪ್ಪ ಪಾಟೀಲ, ನರಗುಂದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ,<br /> ಗದಗ ಜಿಲ್ಲೆ</p>.<p>ವಿವಿಧೆಡೆ ಎರಡು ನಿವೇಶನ, 815 ಗ್ರಾಂ ಚಿನ್ನ, 2 ಕೆ.ಜಿ 600 ಗ್ರಾಂ ಬೆಳ್ಳಿ ವಸ್ತುಗಳು.</p>.<p>* ಸೋಮಪ್ಪ ಟಿ. ಲಮಾಣಿ, ವಿಜಯಪುರ ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಶಾಖಾಧೀಕ್ಷಕ</p>.<p>ವಿವಿಧೆಡೆ ಎರಡು ನಿವೇಶನ, 4 ಎಕರೆ 20 ಗುಂಟೆ ಜಮೀನು, ಕಾರು, ಬೈಕ್, ₹ 8 ಲಕ್ಷ ಬ್ಯಾಂಕ್ ಠೇವಣಿ.</p>.<p>* ನರಸಿಂಹಲು, ತೆರಿಗೆ ಮೌಲ್ಯಮಾಪಕ, ಬಿಬಿಎಂಪಿ ಸಿ.ವಿ. ರಾಮನ್ನಗರ ಉಪವಿಭಾಗ, ಬೆಂಗಳೂರು</p>.<p>ಬೆಂಗಳೂರಿನಲ್ಲಿ ಮೂರು ಮನೆ, ನಾಲ್ಕು ನಿವೇಶನ, ವಾಣಿಜ್ಯ ಕಟ್ಟಡ, ಕಾರು, ಎರಡು ಬೈಕ್, 300 ಗ್ರಾಂ ಚಿನ್ನ, 900 ಗ್ರಾಂ ಬೆಳ್ಳಿ ವಸ್ತುಗಳು.</p>.<p>* ಅಮರೇಶ ಬೆಂಚಮರಡಿ, ನಗರಸಭೆ ಸ್ಯಾನಿಟರಿ ಇನ್ಸ್ಪೆಕ್ಟರ್, ರಾಯಚೂರು</p>.<p>ವಿವಿಧೆಡೆ ಎರಡು ಫ್ಲಾಟ್, ₹ 5 ಲಕ್ಷ ಬೆಲೆಯ ಗೃಹ ಬಳಕೆ ವಸ್ತುಗಳು, ವಾಹನಗಳು, 530 ಗ್ರಾಂ ಚಿನ್ನ, 4 ಕೆ.ಜಿ 900 ಗ್ರಾಂ ಬೆಳ್ಳಿ ವಸ್ತುಗಳು, ₹ 5.67 ಲಕ್ಷ ನಗದು.</p>.<p><strong>ಪಿಡಿಒ 8 ನಿವೇಶನಗಳ ಒಡತಿ</strong></p>.<p>ನೆಲಮಂಗಲ ತಾಲ್ಲೂಕಿನ ವಾಜರಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರೇಖಾ, ನೆಲಮಂಗಲದಲ್ಲಿ ನಾಲ್ಕು ಅಂತಸ್ತಿನ ಮನೆ, 8 ನಿವೇಶನಕ್ಕೆ ಒಡತಿ. ಕಾರು, ಎರಡು ಬೈಕ್, ₹ 34.4 ಲಕ್ಷ ಬ್ಯಾಂಕ್ ಠೇವಣಿ, 264 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ, ಬ್ಯಾಂಕ್ ಖಾತೆಯಲ್ಲಿ ₹ 1.7 ಲಕ್ಷ, ₹ 55,000 ನಗದು ಪತ್ತೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>