ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ನಾಲ್ಕೈದು ಮುಖಂಡರು ಸ್ವಯಂಕೃತ ತಪ್ಪಿನಿಂದ ಜೈಲಿಗೆ ಹೋಗಿ ಬಂದಿದ್ದಾರೆ. ಹುಲಿಗೆ ಒಂದು ಸಾರಿ ರಕ್ತದ ರುಚಿ ಹತ್ತಿದರೆ ಅದು ಮತ್ತೆ ರಕ್ತವನ್ನೇ ಬಯಸುತ್ತದೆ. ಹಾಗೆಯೇ ಬಿಜೆಪಿ ಮುಖಂಡರೂ ಕೂಡ ಅಧಿಕಾರಕ್ಕೆ ಬಂದರೆ ಮತ್ತೆ ತಪ್ಪು ಮಾಡಿ ಜೈಲಿಗೆ ಹೋಗುತ್ತಾರೆ’ ಎಂದು ಲೇವಡಿ ಮಾಡಿದರು.