<p><strong>ಬೆಂಗಳೂರು</strong>: ಈ ಋತುವಿನಲ್ಲಿ ಅತ್ಯು ತ್ತಮ ಸಾಧನೆ ಮಾಡಿ ಗಮನ ಸೆಳೆದಿರುವ ಪಂಕಜ್ ಅಡ್ವಾಣಿ ಮತ್ತೊಮ್ಮೆ ಎರಡು ಕಿರೀಟಗಳನ್ನು ಮುಡಿಗೇರಿಸುವ ಭರವಸೆಯಲ್ಲಿದ್ದಾರೆ.</p>.<p>ಮಂಗಳವಾರ ಇಲ್ಲಿನ ಕೆಎಸ್ಬಿಎದಲ್ಲಿ ಆರಂಭವಾಗಲಿರುವ ರಾಷ್ಟ್ರೀಯ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿ ಯನ್ಷಿಪ್ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರನಾಗಿ ಅವರು ಕಣಕ್ಕೆ ಇಳಿಯಲಿದ್ದಾರೆ.</p>.<p>ಕಳೆದ ವರ್ಷ ಜನವರಿಯಲ್ಲಿ ಪುಣೆಯಲ್ಲಿ ನಡೆದ ರಾಷ್ಟ್ರೀಯ ಚಾಂಪಿ ಯನ್ಷಿಪ್ನ ಎರಡೂ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದ್ದ ಅಡ್ವಾನಿ ಆ ಮೂಲಕ ಹೊಸ ಋತುವಿಗೆ ಶುಭ ನಾಂದಿ ಹಾಡಿದ್ದರು. ನಂತರ ಪ್ರಶಸ್ತಿಗಳನ್ನು ಬಾಚುತ್ತ ಸಾಗಿದ್ದರು.</p>.<p>ಏಪ್ರಿಲ್ನಲ್ಲಿ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನ ಪ್ರಶಸ್ತಿ ಗೆದ್ದು ಆರನೇ ಬಾರಿ ಈ ಸಾಧನೆಯ ಮಾಡಿದ ಖ್ಯಾತಿ ಗಳಿಸಿದರು. ಏಷ್ಯನ್ ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ರನ್ರ್ ಅಪ್ ಆಗಿದ್ದರು. ಜುಲೈನಲ್ಲಿ ಮಲ್ಕೀತ್ ಸಿಂಗ್ ಮತ್ತು ಲಕ್ಷ್ಮಣನ್ ಜೊತೆಗೂಡಿ ತಂಡ ಚಾಂಪಿಯನ್ಷಿಪ್ ಗೆದ್ದಿದ್ದರು. ನಂತರ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ (ಪಾಯಿಂಟ್ ಮಾದರಿ) ಮತ್ತು ಸ್ನೂಕರ್ ಪ್ರಶಸ್ತಿ ಗೆದ್ದರು.</p>.<p>ಸೌರವ್ ಕೊಠಾರಿ, ರೂಪೇಶ್ ಷಾ, ಧ್ರುವ ಸಿತ್ವಾಲ ಮತ್ತು ಅಲೋಕ್ ಕುಮಾರ್ ಕೂಡ ಭಾಗವಹಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಈ ಋತುವಿನಲ್ಲಿ ಅತ್ಯು ತ್ತಮ ಸಾಧನೆ ಮಾಡಿ ಗಮನ ಸೆಳೆದಿರುವ ಪಂಕಜ್ ಅಡ್ವಾಣಿ ಮತ್ತೊಮ್ಮೆ ಎರಡು ಕಿರೀಟಗಳನ್ನು ಮುಡಿಗೇರಿಸುವ ಭರವಸೆಯಲ್ಲಿದ್ದಾರೆ.</p>.<p>ಮಂಗಳವಾರ ಇಲ್ಲಿನ ಕೆಎಸ್ಬಿಎದಲ್ಲಿ ಆರಂಭವಾಗಲಿರುವ ರಾಷ್ಟ್ರೀಯ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿ ಯನ್ಷಿಪ್ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರನಾಗಿ ಅವರು ಕಣಕ್ಕೆ ಇಳಿಯಲಿದ್ದಾರೆ.</p>.<p>ಕಳೆದ ವರ್ಷ ಜನವರಿಯಲ್ಲಿ ಪುಣೆಯಲ್ಲಿ ನಡೆದ ರಾಷ್ಟ್ರೀಯ ಚಾಂಪಿ ಯನ್ಷಿಪ್ನ ಎರಡೂ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದ್ದ ಅಡ್ವಾನಿ ಆ ಮೂಲಕ ಹೊಸ ಋತುವಿಗೆ ಶುಭ ನಾಂದಿ ಹಾಡಿದ್ದರು. ನಂತರ ಪ್ರಶಸ್ತಿಗಳನ್ನು ಬಾಚುತ್ತ ಸಾಗಿದ್ದರು.</p>.<p>ಏಪ್ರಿಲ್ನಲ್ಲಿ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನ ಪ್ರಶಸ್ತಿ ಗೆದ್ದು ಆರನೇ ಬಾರಿ ಈ ಸಾಧನೆಯ ಮಾಡಿದ ಖ್ಯಾತಿ ಗಳಿಸಿದರು. ಏಷ್ಯನ್ ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ರನ್ರ್ ಅಪ್ ಆಗಿದ್ದರು. ಜುಲೈನಲ್ಲಿ ಮಲ್ಕೀತ್ ಸಿಂಗ್ ಮತ್ತು ಲಕ್ಷ್ಮಣನ್ ಜೊತೆಗೂಡಿ ತಂಡ ಚಾಂಪಿಯನ್ಷಿಪ್ ಗೆದ್ದಿದ್ದರು. ನಂತರ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ (ಪಾಯಿಂಟ್ ಮಾದರಿ) ಮತ್ತು ಸ್ನೂಕರ್ ಪ್ರಶಸ್ತಿ ಗೆದ್ದರು.</p>.<p>ಸೌರವ್ ಕೊಠಾರಿ, ರೂಪೇಶ್ ಷಾ, ಧ್ರುವ ಸಿತ್ವಾಲ ಮತ್ತು ಅಲೋಕ್ ಕುಮಾರ್ ಕೂಡ ಭಾಗವಹಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>