<p><strong>ನವದೆಹಲಿ:</strong> ರಫ್ತು ಉತ್ತೇಜನಕ್ಕೆ ಹೆಚ್ಚು ಆಸಕ್ತಿ ತೋರುವ ರಾಜ್ಯಗಳಿಗೆ ಉತ್ತೇಜನಾ ಕೊಡುಗೆ ನೀಡುವುದನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.</p>.<p>‘ದೇಶಿ ರಫ್ತು ಹೆಚ್ಚಳಗೊಳ್ಳುವುದರಿಂದ ಆರ್ಥಿಕತೆಗೂ ಉತ್ತೇಜನ ಸಿಗಲಿದೆ. ಈ ಸಂಬಂಧ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಲಾಗಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ. ಇತ್ತೀಚೆಗೆ ನಡೆದಿದ್ದ ವ್ಯಾಪಾರ ಅಭಿವೃದ್ಧಿ ಮತ್ತು ಉತ್ತೇಜನಾ ಮಂಡಳಿಯ ಸಭೆಯಲ್ಲಿ ಈ ವಿಷಯ ಪ್ರಮುಖವಾಗಿ ಪ್ರಸ್ತಾವಗೊಂಡಿತ್ತು.</p>.<p>‘ರಫ್ತು ಉತ್ತೇಜಿಸಲು ರಾಜ್ಯ ಸರ್ಕಾರಗಳಿಗೆ ಯಾವ ಬಗೆಯಲ್ಲಿ ಉತ್ತೇಜನ ನೀಡಬೇಕು ಎನ್ನುವುದರ ಬಗ್ಗೆ ವಾಣಿಜ್ಯ ಸಚಿವಾಲಯ ಚಿಂತಿಸುತ್ತಿದೆ. ನಾನು ಈ ಸಲಹೆಯನ್ನು ರಾಜ್ಯಗಳ ಗಮನಕ್ಕೆ ತಂದಿರುವೆ. ರಾಜ್ಯಗಳ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೆಚ್ಚಳಗೊಂಡರೆ ಅದು ದೇಶದ ಆರ್ಥಿಕ ಬೆಳವಣಿಗೆಗೂ ನೆರವು ನೀಡಲಿದೆ. ಒಟ್ಟಾರೆ ರಫ್ತು ವಹಿವಾಟು ಉತ್ತೇಜಿಸಿ, ಕೈಗಾರಿಕಾ ಬೆಳವಣಿಗೆ ವೃದ್ಧಿಸಲು ವಾಣಿಜ್ಯ ಸಚಿವಾಲಯ ಕಾರ್ಯತಂತ್ರ ರೂಪಿಸುತ್ತಿದೆ’ ಎಂದು ಹೇಳಿದ್ದಾರೆ.<br /> *<br /> <strong>ಮರುಪಾವತಿಗೆ ‘ಇ–ವಾಲೆಟ್’ ಪರಿಹಾರ</strong><br /> ‘ಜಿಎಸ್ಟಿ ಮರುಪಾವತಿ ಕುರಿತು ರಫ್ತುದಾರರು ವ್ಯಕ್ತಪಡಿಸಿರುವ ಕಳವಳಕ್ಕೆ ಪ್ರತಿಕ್ರಿಯಿಸಿರುವ ಅವರು, ಈ ಸಮಸ್ಯೆಗೆ ‘ಇ–ವಾಲೆಟ್’ ವ್ಯವಸ್ಥೆ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ. ಏಪ್ರಿಲ್ – ನವೆಂಬರ್ ಅವಧಿಯಲ್ಲಿ ದೇಶದ ರಫ್ತು ವಹಿವಾಟು ಶೇ 12 ರಷ್ಟು ಹೆಚ್ಳಳಗೊಂಡು ₹ 12.77 ಲಕ್ಷ ಕೋಟಿಗಳಷ್ಟಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ರಫ್ತು ಉತ್ತೇಜನಕ್ಕೆ ಹೆಚ್ಚು ಆಸಕ್ತಿ ತೋರುವ ರಾಜ್ಯಗಳಿಗೆ ಉತ್ತೇಜನಾ ಕೊಡುಗೆ ನೀಡುವುದನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.</p>.<p>‘ದೇಶಿ ರಫ್ತು ಹೆಚ್ಚಳಗೊಳ್ಳುವುದರಿಂದ ಆರ್ಥಿಕತೆಗೂ ಉತ್ತೇಜನ ಸಿಗಲಿದೆ. ಈ ಸಂಬಂಧ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಲಾಗಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ. ಇತ್ತೀಚೆಗೆ ನಡೆದಿದ್ದ ವ್ಯಾಪಾರ ಅಭಿವೃದ್ಧಿ ಮತ್ತು ಉತ್ತೇಜನಾ ಮಂಡಳಿಯ ಸಭೆಯಲ್ಲಿ ಈ ವಿಷಯ ಪ್ರಮುಖವಾಗಿ ಪ್ರಸ್ತಾವಗೊಂಡಿತ್ತು.</p>.<p>‘ರಫ್ತು ಉತ್ತೇಜಿಸಲು ರಾಜ್ಯ ಸರ್ಕಾರಗಳಿಗೆ ಯಾವ ಬಗೆಯಲ್ಲಿ ಉತ್ತೇಜನ ನೀಡಬೇಕು ಎನ್ನುವುದರ ಬಗ್ಗೆ ವಾಣಿಜ್ಯ ಸಚಿವಾಲಯ ಚಿಂತಿಸುತ್ತಿದೆ. ನಾನು ಈ ಸಲಹೆಯನ್ನು ರಾಜ್ಯಗಳ ಗಮನಕ್ಕೆ ತಂದಿರುವೆ. ರಾಜ್ಯಗಳ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೆಚ್ಚಳಗೊಂಡರೆ ಅದು ದೇಶದ ಆರ್ಥಿಕ ಬೆಳವಣಿಗೆಗೂ ನೆರವು ನೀಡಲಿದೆ. ಒಟ್ಟಾರೆ ರಫ್ತು ವಹಿವಾಟು ಉತ್ತೇಜಿಸಿ, ಕೈಗಾರಿಕಾ ಬೆಳವಣಿಗೆ ವೃದ್ಧಿಸಲು ವಾಣಿಜ್ಯ ಸಚಿವಾಲಯ ಕಾರ್ಯತಂತ್ರ ರೂಪಿಸುತ್ತಿದೆ’ ಎಂದು ಹೇಳಿದ್ದಾರೆ.<br /> *<br /> <strong>ಮರುಪಾವತಿಗೆ ‘ಇ–ವಾಲೆಟ್’ ಪರಿಹಾರ</strong><br /> ‘ಜಿಎಸ್ಟಿ ಮರುಪಾವತಿ ಕುರಿತು ರಫ್ತುದಾರರು ವ್ಯಕ್ತಪಡಿಸಿರುವ ಕಳವಳಕ್ಕೆ ಪ್ರತಿಕ್ರಿಯಿಸಿರುವ ಅವರು, ಈ ಸಮಸ್ಯೆಗೆ ‘ಇ–ವಾಲೆಟ್’ ವ್ಯವಸ್ಥೆ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ. ಏಪ್ರಿಲ್ – ನವೆಂಬರ್ ಅವಧಿಯಲ್ಲಿ ದೇಶದ ರಫ್ತು ವಹಿವಾಟು ಶೇ 12 ರಷ್ಟು ಹೆಚ್ಳಳಗೊಂಡು ₹ 12.77 ಲಕ್ಷ ಕೋಟಿಗಳಷ್ಟಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>