‘ಹಿಂದೂ ಆಗಿದ್ದರೆ ಗೋಹತ್ಯೆ ನಿಷೇಧಿಸಲಿ’ ಎನ್ನುವ ಯೋಗಿ ಆದಿತ್ಯನಾಥರ ಸವಾಲಿಗೆ, ಸಿದ್ದರಾಮಯ್ಯ ಉತ್ತರ ನೀಡುವ ಆವಶ್ಯಕತೆಯಿರಲಿಲ್ಲ. ‘ಹಿಂದುಸ್ತಾನ’ ಎಂಬುದು ಸ್ಥಳವಾಚಕವೇ ಹೊರತು ಸಂಪ್ರದಾಯವಲ್ಲ. ಇದನ್ನು, ಪ್ರಬುದ್ಧ ಅಹಿಂದ ಮುಖಂಡರು ಹಿಂದೂ ಯೋಗಿಗೆ ಮನದಟ್ಟು ಮಾಡಿಕೊಡಬೇಕಾಗಿತ್ತು. ‘ಹಿಂದೂ’ ಎಂಬ ಶಬ್ದದಲ್ಲೇ ‘ಮರ್ಯಾದೆ’ ಇಲ್ಲ! ಆಕ್ರಮಣಕಾರಿ ಯವನರು, ತಮ್ಮಿಂದ ಸೋಲನುಭವಿಸಿದ ಜನರನ್ನು ಗೌರವಪೂರ್ವಕವಾಗಿ ಹೀಗೆ ಕರೆದಿರಲಾರರು. ಅವರನ್ನು ಅನುಸರಿಸಿ ಬಂದ ಮುಸ್ಲಿಂ ದಾಳಿಕೋರರಿಗೂ ಇಲ್ಲಿನ ವೈದಿಕ, ಜೈನ, ಸಿಖ್ ಸಮುದಾಯಗಳೆಲ್ಲಾ ಒಂದೇ. ಸೋತ ಈ ಸಮುದಾಯಗಳಿಗೆ ಆಕ್ರಮಣಕಾರರಿಟ್ಟ ‘ಹಿಂದೂ’ ಹೆಸರನ್ನು ಆದರದಿಂದ ಸ್ವೀಕರಿಸಿ ಅದನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಹುಂಬತನವೇ ಸರಿ! ಸಾಂಪ್ರದಾಯಿಕ ಮೌಲ್ಯಗಳಿರುವುದು ‘ಭಾರತೀಯತೆ’ಯಲ್ಲೇ ಹೊರತು ‘ಹಿಂದುತ್ವ’ದಲ್ಲಲ್ಲ.