‘ಸತ್ತ ದನ, ಎತ್ತುಗಳ ಚರ್ಮ ಸುಲಿಯುವ ನಮ್ಮ ಕುಲಕಸುಬಿನ ಕಾರಣದಿಂದ ನಾವು ತೀರಾ ಅವಮಾನ ಎದುರಿಸುತ್ತಿದ್ದೇವೆ. ಆದರೆ ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದು ಆರಾಮವಾಗಿ ಓಡಾಡುತ್ತಿದ್ದಾರೆ. ಮನೆಯಿಂದ ಹೊರಗೆ ಹೆಜ್ಜೆ ಇಡಲೂ ಭಯವಾಗುತ್ತಿದೆ. ಈ ಎಲ್ಲಾ ಕಾರಣದಿಂದ ಬೌದ್ಧ ಧರ್ಮಕ್ಕೆ ಮತಾಂತರವಾಗಲು ನಿರ್ಧರಿಸಿದ್ದೇವೆ. ಆದರೆ ಮತಾಂತರದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಮತಾಂತರವಾಗುವಂತೆ ನಮ್ಮ ಸಮುದಾಯದ ಇನ್ನೂ ಹಲವರನ್ನು ಕೇಳಿಕೊಂಡಿದ್ದೇವೆ’ ಎಂದು ಕುಟುಂಬದ ಹಿರಿಯ ಮಗ ಹೇಳಿದ್ದಾರೆ. ಊನಾದಲ್ಲಿ ನಡೆದಿದ್ದ ಹಲ್ಲೆಯ ಸಂತ್ರಸ್ತರಲ್ಲಿ ಇವರೂ ಒಬ್ಬರು.