ಬೈಕ್ಗೆ ಡಿಕ್ಕಿಯಾದ ಕಾರು ನಂತರ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಹಾಗೂ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್ನ ಹಿಂಬದಿಯ ಸವಾರ ಪುಣ್ಯಾನಂದ ಹನುಮಂತಪ್ಪ ಕುಪ್ಪೇಲೂರ (18), ಬೆಂಗಳೂರಿನ ಬನಶಂಕರಿನಗರದ ಅನಿಲಕುಮಾರ ಬಿಂದುರಾವ್ ಮರಳಿ (56), ಉತ್ತರಾದಿಮಠದ ಜಯತೀರ್ಥ ರಾಮಾಚಾರಿ ಕಟ್ಟಿ (46), ಇಂದ್ರಾಬಾಯಿ ಮಧ್ವಾಚಾರ ಗಂಗೂರು (55), ಕಾಮಾಕ್ಷಿ ಪಾಳ್ಯದ ಶೇಖರ ಬಿ.ಎ ವೀರಕ್ಯಾತಯ್ಯ (41) ಹಾಗೂ ಬೈಕ್ನ ಹಿಂಬದಿಯ ಸವಾರ ಹರಿಹರ ತಾಲ್ಲೂಕಿನ ಗುಡ್ಡದ ಬೇವಿನಹಳ್ಳಿಯ ಪುಣ್ಯಾನಂದ ಹನುಮಂತಪ್ಪ ಕುಪ್ಪೇಲೂರ (18) ಗಾಯಗೊಂಡಿದ್ದಾರೆ.