ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದ ಇಲ್ಲಿಯ ಕೃಷಿ ಕಾಲೇಜಿನ ಡೀನ್ ಡಾ. ಜೆ.ಆರ್.ಪಾಟೀಲ, ‘ವಿಶಿಷ್ಟವಾದ ಮಣ್ಣು ಮತ್ತು ಹವಾಮಾನದಿಂದ ಇಲ್ಲಿ ಬೆಳೆಯುವ ತೊಗರಿಯು ಉತ್ತಮ ಗುಣಮಟ್ಟದ್ದಾಗಿರುತ್ತದೆ. ಈ ಜಿಲ್ಲೆಯ ರೈತರು, ಬೇಳೆ ಕಾಳು ಕಾರ್ಖಾನೆಗಳು ಮತ್ತು ವರ್ತಕರಿಗೆ ಅನುಕೂಲವಾಗುವಂತೆ ಭೌಗೋಳಿಕ ಸೂಚಿಕೆ (ಜಿಐ) ಪಡೆಯಲು ಚೆನ್ನೈನ ಜಿ.ಐ ನೋಂದಣಿ ಕಚೇರಿಗೆ ಅರ್ಜಿ ಮತ್ತು ದಾಖಲೆಗಳನ್ನು ಸಲ್ಲಿಸಲಾಗಿದೆ’ ಎಂದರು.