ಬೊಮ್ಮೂರು ಅಗ್ರಹಾರ ಗ್ರಾಮದ ಸ.ನಂ 241ರಲ್ಲಿ 5 ಎಕರೆ 35 ಗುಂಟೆ ಜಾಗವನ್ನು ಸರ್ಕಾರ ಅಲ್ಪಸಂಖ್ಯಾತರ ಖಬರಸ್ತಾನ್ಗೆ ಮಂಜೂರು ಮಾಡಿದೆ. ಈ ಪೈಕಿ ಒಂದು ಎಕರೆ ಜಾಗವನ್ನು ಭೂ ಪರಿರ್ತನೆ ಮಾಡಲಾಗಿದೆ. ಈ ಜಾಗದಲ್ಲಿ ಹಲವು ವರ್ಷಗಳಿಂದ ಅನಾಥ ಮುಸ್ಲಿಂ ಮಕ್ಕಳ ವಸತಿ ಶಾಲೆ ನಡೆಯುತ್ತಿದೆ. ಖಬರಸ್ತಾನ್ಗೆ ಮೀಸಲಾದ ಜಾಗದಲ್ಲಿ ಕಟ್ಟಡವೊಂದರ ನಿರ್ಮಾಣಕ್ಕೆಂದು ಮಂಗಳವಾರ ನಸುಕಿನಲ್ಲಿ ಮೈಸೂರಿನ ಮುಸ್ಲಿಂ ಯುವಕರ ಗುಂಪು ಕಾಂಕ್ರೀಟ್, ಕಬ್ಬಿಣ ವಸ್ತುಗಳು ಹಾಗೂ ವಾಹನಗಳನ್ನು ತಂದಿತ್ತು.