ವೈದ್ಯೆ ಡಾ.ಶಾರದ ಶೆಟ್ಟಿ ಮಾತನಾಡಿ, ‘ಮಕ್ಕಳಿಗೆ ವಿದ್ಯೆ ಜತೆಗೆ ಬುದ್ಧಿ, ಸಂಸ್ಕೃತಿ ಅಶ್ಯಕವಿದ್ದು, ಅವುಗಳನ್ನು ಕಲಿಸುವ ನಿಟ್ಟಿನಲ್ಲಿ ಪೋಷಕರು ಶಿಕ್ಷಕರು ಮುಂದಾಗಬೇಕು. ಇಂದಿನ ಮಕ್ಕಳ ಮನಸ್ಸು ಸೂಕ್ಷ್ಮವಾಗಿದ್ದು, ಅದನ್ನು ಅರಿತು ಅವರಿಗೆ ಸರಿಯಾದ ದಾರಿಯನ್ನು ತೋರಿಸಬೇಕು. ಇನ್ನು 10ವರ್ಷಗಳ ಶಾಲಾ ಶಿಕ್ಷಣ ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಈ ಸಮಯದಲ್ಲಿ ಕಲಿತ ಜೀವನ ಮೌಲ್ಯಗಳು ಜೀವನವಿಡಿ ಸಹಕಾರಿಯಾಗುತ್ತವೆ’ ಎಂದು ತಿಳಿಸಿದರು.