32ನೇ ಸುತ್ತಿನ ಪರ್ಯಾಯಕ್ಕೆ ಉಡುಪಿಯ ಕೃಷ್ಣ ಮಠವೂ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಅದ್ಧೂರಿ ಪರ್ಯಾಯ ಮೆರವಣಿಗೆ ಬುಧವಾರ (ಜ.17) ಮಧ್ಯರಾತ್ರಿ ನಡೆಯಲಿದೆ. ಡೋಲು, ನಾಸಿಕ್ ಬ್ಯಾಂಡ್, ಚೆಂಡೆ, ವೀರಗಾಸೆ, ಕೋಲಾಟ, ಮರ
ಗೋಲು ಮುಂತಾದ ಬರೋಬ್ಬರಿ 60 ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ನೂರಾರು ಕಲಾವಿದರು ಸಹ ಭಾಗವಹಿಸುವರು. ಸುಮಾರು 2 ಗಂಟೆಗಳ ಕಾಲ ಈ ಮೆರವಣಿಗೆ ನಡೆಯಲಿದೆ. ಇದಕ್ಕಾಗಿ ನಗರದ ಜೋಡುಕಟ್ಟೆಯಲ್ಲಿ ಈಗಾಗಲೇ ಭರ್ಜರಿ ಸಿದ್ಧತೆ ಮಾಡಲಾಗಿದೆ.