ಕಾಂಗ್ರೆಸ್ ವೈಫಲ್ಯಗಳನ್ನು ದೊಡ್ಡ ಮಟ್ಟದಲ್ಲಿ ಜನರಿಗೆ ಮುಟ್ಟಿಸಬೇಕು. ಕಾಂಗ್ರೆಸ್ ಪಕ್ಷ ವೀರಶೈವ– ಲಿಂಗಾಯತ ಧರ್ಮ ಒಡೆಯುವ ವಿಷಯವನ್ನು ಕೈಗೆತ್ತಿಕೊಂಡಿತು. ಅದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂಬುದು ಗೊತ್ತಾಗುತ್ತಿದ್ದಂತೆ ಸುಮ್ಮನಾಯಿತು. ಜಾತಿ ಮತ್ತು ಧರ್ಮದ ವಿಚಾರದಲ್ಲಿ ಒಡಕುಂಟು ಮಾಡುತ್ತಿರುವುದನ್ನು ಜನರ ಮುಂದೆ ಬಯಲು ಮಾಡಬೇಕು ಎಂದು ಸಭೆಯಲ್ಲಿ ಗೋಯಲ್ ಸಲಹೆ ನೀಡಿದರು.